ಪ್ರಮುಖ ಸುದ್ದಿ
ಸಾಣೇಹಳ್ಳಿಯ ತರಳಬಾಳು ಮಠಕ್ಕೆ ಮಾದಿಗ ಸಮುದಾಯದ ಉತ್ತರಾಧಿಕಾರಿ?
ಕೊಪ್ಪಳ: ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ‘ಮತ್ತೆ ಕಲ್ಯಾಣ’ ಸಂವಾದದಲ್ಲಿ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಡಾ.ಪಂಡಿತಾರಾಧ್ಯ ಸ್ವಾಮೀಜಿ ತರಳಬಾಳು ಮಠದ ಮೂಲ ಪುರುಷ ಮರುಳ ಸಿದ್ಧರು. ಅವರು ಮಾದಿಗ ಸಮುದಾಯದವರು ಎಂದು ಹೇಳಲು ಹೆಮ್ಮೆ ಇದೆ. ಸಾಣೇಹಳ್ಳಿಯ ತರಳಬಾಳು ಮಠ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಮಾದಿಗ ಸಮುದಾಯದಲ್ಲೇ ಅರ್ಹತೆ ಹಾಗೂ ಯೋಗ್ಯತೆ ಇರುವ ಉತ್ತರಾಧಿಕಾರಿ ಸಿಕ್ಕರೆ ಸಾಣೇಹಳ್ಳಿ ಮಠದ ಉತ್ತರಾಧಿಕಾರಿಯಾಗಿ ನಿಯೋಜಿಸಲಾಗುವುದು. ಯಾವುದೇ ಸಮುದಾಯದವರೇ ಆಗಿರಲಿ, ಅರ್ಹ ಮತ್ತು ಯೋಗ್ಯ ಉತ್ತರಾಧಿಕಾರಿ ಆಗಿದ್ದರೆ ಅವರನ್ನೇ ಉತ್ತರಾಧಿಕಾರಿ ಮಾಡಲಾಗುವುದು ಎಂದು ಡಾ.ಪಂಡಿತಾರಾಧ್ಯ ಶ್ರೀ ಹೇಳಿದ್ದಾರೆ.