ಪ್ರಮುಖ ಸುದ್ದಿ
ರಮೇಶ ಬೇರೆ ಪಕ್ಷ ನಾನೇ ಬೇರೆ ಪಕ್ಷ- ಸತೀಶ ಜಾರಕಿಹೊಳಿ
ಹಾವೇರಿಃ ರಮೇಶ ಜಾರಕಿಹೊಳಿ ತಾವಾಗಿಯೇ ಪಕ್ಷ ಬಿಟ್ಟು ಹೋಗಿದ್ದಾರೆ. ಇನ್ನೊಂದು ವಾರದಲ್ಲಿ ರಮೇಶ ಬಿಜೆಪಿಗೆ ಹೋಗಲಿದ್ದಾರೆ. ರಮೇಶ ಬೇರೆ ಪಕ್ಷ ನಾನೇ ಬೇರೆ ಪಕ್ಷದಲ್ಲಿದ್ದೇನೆ. ರಮೇಶ ಜಾರಕಿ ಹೊಳಿ ವಿರುದ್ಧ ಪಕ್ಷ ಸಂಘಟನೆ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ಮುಖಂಡ ಸತೀಶ ಜಾರಕಿಹೊಳಿ ತಿಳಿಸಿದರು.
ಹಾವೇರಿಯಲ್ಲಿ ಪಕ್ಷ ಸಂಘಟನೆ ಕುರಿತು ಮಾತನಾಡಿ ಅವರು, ಉಪ ಚುನಾವಣೆಯಲ್ಲಿ ರಮೇಶರನ್ನು ಸೋಲಿಸಲು ಈಗಿನಿಂದಲೇ ತಂತ್ರಗಾರಿಕೆ ಸಂಘಟನೆ ನಡೆಸುತ್ತಿದ್ದಾರೆ. ಉಪ ಚುನಾವಣೆಯಲ್ಲಿ ಸಹೋದರರ ಮಧ್ಯೆ ಸವಾಲ್ ನಡೆಯೋದಂತು ಗ್ಯಾರಂಟಿ.