ಪ್ರಮುಖ ಸುದ್ದಿ

ದಲಿತರಿಗೆ ಬಿಜೆಪಿಯಿಂದ ಬಂಪರ್ ಕೊಡುಗೆ

ದಲಿತರಿಗೆ ವಿವಿಧ ಇಲಾಖೆಯಡಿ ಶೇ.90 ರಷ್ಟು ಸಬ್ಸಿಡಿ

ಬೆಂಗಳೂರಃ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ದಲಿತರಿಗೆ ಬಂಪರ್ ಕೊಡುಗೆ ನೀಡಲು ಮುಂದಾಗಿದೆ.

ಎಸ್ಸಿ ಮತ್ತು ಎಸ್ಟಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 1 ರೂ. ಪ್ರೋತ್ಸಾಹ ಧನ‌ ಹೆಚ್ಚಳ ಮಾಡಲಾಗಿದ್ದು, ಅಲ್ಲದೆ ದಲಿತರಿಗೆ ತೋಟಗಾರಿಕೆ ಪಾಲಿ ಹೌಸ್, ಕೃಷಿ ಯಂತ್ರೋಪಕರಣಗಳ ಖರೀಧಿಯಲ್ಲಿ ಶೇ.90 ರಷ್ಟು ಸಬ್ಸಿಡಿ ನೀಡಲು ಅನುಮೋದನೆ ನೀಡಲಾಗಿದೆ ಈ ಕುರಿತು ಶೀಘ್ರದಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಮಾಜ ಕಲ್ಯಾಣ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಸಭೆ ಬಳಿಕ ಕಾರಜೋಳ ಮಾಹಿತಿ ನೀಡಿದ್ದಾರೆ.

ಇಷ್ಟೆ ಅಲ್ಲದೆ ದಲಿತರಿಗೆ ಮನೆ ಕಟ್ಟಲು, ರೇಷ್ಮೆ ಸಾಗಾಣಿಕೆ ಮಾಡಲು ಶೇ.90 ರಷ್ಟು ಸಬ್ಸಿಡಿ ನೀಡುವ‌ ನಿರ್ಣಯವು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button