ಕ್ಯಾಂಪಸ್ ಕಲರವ

ಯುವಕರು ಕೃಷಿಯತ್ತ ಗಮನ ಹರಿಸಲಿ- ಅಶೋಕ ಚೌದ್ರಿ

ಕೃಷಿ ಮಾನವ ಕುಲಕೆ ಆಧಾರ 

ಯಾದಗಿರಿ,ಶಹಾಪುರ: ಭಾರತ ಕೃಷಿ ಪ್ರಧಾನ ದೇಶ. ಈಗ ಅದು ತನ್ನ ಸತ್ವವನ್ನು ಕಳೆದುಕೊಂಡು, ನಗರ ಪ್ರದೇಶಗಳತ್ತ ಮುಖ ಮಾಡುತ್ತಿರುವುದು ಕಳವಳಕಾರಿ ವಿಷಯವಾಗಿದೆ ಎಂದು ಅಶೋಕ ಚೌದ್ರಿ ತಿಳಿಸಿದರು.
ತಾಲೂಕಿನ ಶಿರವಾಳದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ಕೌಟ್ ಮತ್ತು ಗೈಡ್ಸ್ ಆಯೋಜಿಸಿರುವ ನಮ್ಮ ನಡಿಗೆ ಕೃಷಿಯೆಡೆಗೆ ಎಂಬ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಕೃಷಿ ಕಾಯಕದಿಂದ ರೈತರು ಸಾಕಷ್ಟು ಹೈರಾಣಾಗಿದ್ದಾರೆ. ಕೃಷಿ ಅವರ ಬದುಕು ದುಸ್ಥಿತಿಗೆ ತಲುಪಿದೆ. ಸಮರ್ಪಕ ಸಹಕಾರ ಸಹಾಯ ದೊರೆಯದ ಕಾರಣ ನೈಸರ್ಗಿಕ ವರ ಸಿಕ್ಕರೆ ಮಾತ್ರ ಅವರಿಗೆ ಮನೆ ತುಂಬಾ ದವಸ ಧಾನ್ಯ ಹೊಟ್ಟೆ ತುಂಬಾ ಊಟ ಇಲ್ಲವಾದಲ್ಲಿ ಇಲ್ಲ ಎನ್ನುವ ಸ್ಥಿತಿ ಬಂದೊದಗಿದೆ.

ಆದರೆ ಕೃಷಿ ಕಾಯಕಕ್ಕೆ ಸಂಪೂರ್ಣ ಸಹಕಾರ ದೊರೆತರೆ ಕೃಷಿಯಿಂದ ಬಂಗಾರದ ಬೆಳೆಯನ್ನು ಪಡೆಯಬಹುದಾಗಿದೆ. ಯುವ ಜನಾಂಗ, ಮಕ್ಕಳು ಕೃಷಿಯ ಕುರಿತು ಆಧುನಿಕ ಪರಿಕರಗಳನ್ನು ಯಂತ್ರೋಪಕಣ ಬಳಸುವದನ್ನು ಮಾಹಿತಿ ಪಡೆದುಕೊಂಡು, ಕೃಷಿ ತಜ್ಞರ ಸಲಹೆ ಸೂಚನೆ ಮೇರೆಗೆ ಕೃಷಿಯಲ್ಲಿ ತೊಡಗಿಸಿಕೊಂಡರೆ ಖಂಡಿತವಾಗಿ ಭೂತಾಯಿ ಕೈಹಿಡಿಯಲಿದ್ದಾಳೆ.

ಕೃಷಿಯ ಹಳೆ ಪದ್ಧತಿ ಬಿಟ್ಟು ವಿನೂತನ ಬೆಳೆ, ತೋಟಗಾರಿಕೆ ಇತರೆ ಆಧುನಿಕ ಕೃಷಿಗೆ ಒತ್ತು ನೀಡಬೇಕಿದೆ. ಆ ಹಿನ್ನೆಲೆಯಲ್ಲಿ ನವ ಯುವಕರು ಕೃಷಿಯತ್ತ ಹೆಜ್ಜೆ ಹಾಕಬೇಕು. ಕೃಷಿ ಸುಧಾರಿಸಿದಲ್ಲಿ ಮಾತ್ರ ನಮ್ಮ ದೇಶವು ಬೆಳೆಯಲಿದೆ. ಇಲ್ಲವಾದಲ್ಲಿ ಮುಂದಿನ ಸ್ಥಿತಿ ನೆನಪಿಸಿಕೊಂಡರೆ ಜೀವನ ಕಷ್ಟಕರವಿದೆ. ಹಿಂದಿಗಿಂತಲೂ ಈಗ ಕೃಷಿ ತುಂಬಾ ಅವಶ್ಯಕವಾಗಿದೆ. ಕೃಷಿ ಉಳಿದರೆ ಮಾನವ ಕುಲ ಉಳಿಯುವುದು. ಕೃಷಿ ಇಡಿ ಮಾನವ ಕುಲಕೆ ಆಧಾರವಾಗಿದೆ ಅದನ್ನು ಬೆಳೆಸಬೇಕಿದೆ ಎಂದರು.

ಹಿರಿಯ ಶಿಕ್ಷಕರಾದ ಶರಣಗೌಡ.ಎಂ.ಬಿರಾದಾರ್ ಮಾತನಾಡಿ, ಕೃಷಿಯಿಂದ ಆಗುವ ಲಾಭ ಅದರಿಂದ ಆರೋಗ್ಯಕ್ಕೆ ಪೂರಕವಾದ ಬೆಳೆಗಳು, ನಿಷ್ಠೆಯಿಂದ ದುಡಿದರೆ ಉತ್ತಮ ಬೆಳೆ ಪಡೆದು ದೇಶಕ್ಕೆ ಕೊಡುಗೆಯನ್ನು ನೀಡಬಹುದು. ಕೃಷಿಯಿಂದ ಆರೋಗ್ಯವು ಸದೃಢ ಕೈತುಂಬಾ ಲಾಭವು ಪಡೆಯಬಹುದು ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕೃಷಿಯಡೆ ಹೆಜ್ಜೆ ಹಾಕಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಬಸವರಾಜ ಗೋಗಿ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ಶಿಕ್ಷಕರಾದ ನಾಗಪ್ಪ ಪ್ರಭು, ಸಂತೋಷ ಸೇಡಂಕರ, ಶೈಲಾ ಕೋಲಾರ್, ಅನುಪಮಾ, ಕಾಶಿಬಾಯಿ ಹಾಬಾಳ, ಪ್ರಕಾಶ ಕಟ್ಟಿ, ಎಸ್‍ಡಿಎಂಸಿ ಅಧ್ಯಕ್ಷ ಭೀಮರಾಯ ಕುಸ್ತಿ, ಶರಣಪ್ಪ ಕೋಲ್ಕಾರ ಇದ್ದರು.

Related Articles

Leave a Reply

Your email address will not be published. Required fields are marked *

Back to top button