ಸಾಹಿತ್ಯ

ಸೆಲ್ಫಿ ಕ್ರೇಜ್ & ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಪ್ರಮುಖ ಘಟನಾವಳಿಗಳ ಝಲಕ್!

ಪೂಜೆಯಿಂದ ದೂರ ದೂರ

83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾದ್ಯಕ್ಷರಾದ ಬಂಡಾಯ ಸಾಹಿತಿ ಚಂದ್ರಶೇಖರ ಪಾಟೀಲ್ ಭುವನೇಶ್ವರಿ ದೇವಿಯ ಪೂಜೆಯಲ್ಲಿ ಪಾಲ್ಗೊಳ್ಳಲಿಲ್ಲ. ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ ಮತ್ತಿತರರು ಪೂಜೆ ಸಲ್ಲಿಸಿ ಬಂದರಾದರೂ ಚಂಪಾ ಅವರು ಮಾತ್ರ ಪೂಜೆಯಿಂದ ದೂರವೇ ಉಳಿದರು.

ಮೈಸೂರು ಪೇಟ ಬ್ಯಾಡ್ರೀ

ಸಮ್ಮೇಳನದ ಸರ್ವಾದ್ಯಕ್ಷರಾಗಿರುವ ಸಾಹಿತಿ ಚಂಪಾ ಮಲ್ಲಿಗೆ ಸಾರೋಟ ಏರಿ ಮೆರವಣಿಗೆ ನಡೆಸಿದರು. ಆದರೆ, ಇದೇ ವೇಳೆ ಸಚಿವ ಡಾ.ಹೆಚ್.ಡಿ.ಮಹಾದೇವಪ್ಪ ಮೈಸೂರು ಪೇಟ ತೊಡಿಸಲು ಮುಂದಾದರಾದರೂ ಚಂಪಾ ಮಾತ್ರ ಉತ್ತರ ಕರ್ನಾಟಕದ ಭಾಷೆಯಲ್ಲಿ ಬ್ಯಾಡ ಬಿಡ್ರಿ ಎಂದು ನಿರಾಕರಸಿದರು.

ಸಿಎಂ ಎದುರೇ ಧರಣಿ

ಒಂದು ಕಡೆ ಕನ್ನಡ ಜಾತ್ರೆಯನ್ನುದ್ದೇಶಿಸಿ ವೇದಿಕೆಯಲ್ಲಿ ಚಂಪಾ ಅವರು ಮಾತನಾಡುತ್ತಿದ್ದರೆ ಮತ್ತೊಂದು ಕಡೆ ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ಕೆಲವರು ಪ್ರತಿಭಟನೆ ನಡೆಸಿದರು. ಸಿಎಂ ಸಿದ್ಧರಾಮಯ್ಯ ಸಮ್ಮುಖದಲ್ಲೇ ಕೆಲವರು ವೇದಿಕೆಗೆ ನುಗ್ಗಲು ಯತ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಜೇಬಿಗೆ ಕನ್ನ

ಸಮ್ಮೇಳನದಲ್ಲಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದ ಆವರಣದಲ್ಲಿ ಬೀಡು ಬಿಟ್ಟಿದ್ದ ಕಳ್ಳರ ತಂಡ ಹಲವರ ಜೇಬಿಗೆ ಕನ್ನ ಹಾಕಿದ್ದು ಹತ್ತಾರ ಜನರ ಬಳಿ ಲಕ್ಷಾಂತರ ರೂಪಯಿ ದೋಚಿದೆ. ಪರಿಣಾಮ ಕನ್ನಡ ಜಾತ್ರೆಗೆ ಬಂದವರು ಸಾಲ ಮಾಡಿ ಊರಿಗೆ ಮರಳುವ ಸ್ಥಿತಿ ನಿರ್ಮಾಣವಾಗಿತ್ತು.

ಕಸಾಪ ಧರಣಿ

ಸರಿಯಾದ ಕೌಂಟರ್ ವ್ಯವಸ್ಥೆ ಮಾಡಿಲ್ಲ ಎಂದು ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷರ ನೇತೃತ್ವದಲ್ಲೇ ಪ್ರತಿಭಟನೆ ನಡೆಸಿದದ ಘಟನೆ ನಡೆಯಿತು. ಪ್ರತ್ಯೇಕ ಕೌಂಟರ್ ತೆರೆಯುವಂತೆ ಕನ್ನಡಪರ ಕಾರ್ಯಕರ್ತರೇ ಧರಣಿ ನಡೆಸಿದರು.

ಮಾತು ಬದಲು

ಸಮ್ಮೇಳನಾದ್ಯಕ್ಷರಾದ ಚಂಪಾ ತಮ್ಮ ಭಾಷಣದಲ್ಲಿ ಮೊದಲಿಗೆ  ಸಚಿವ ತನ್ವೀರ್ ಸೇಠ್ ಶಿಕ್ಷಣ ಇಲಾಖೆ ನಿಭಾಯಿಸಲು ಅಸಮರ್ಥರಾಗಿದ್ದಾರೆ ಅವರನ್ನು ಸಂಪುಟದಿಂದ ಕೈಬಿಡಿ ಎಂದು ಸಿಎಂ ಸಿದ್ಧರಾಮಯ್ಯರನ್ನು ಒತ್ತಾಯಿಸಿದರು. ಬಳಿಕ ತನ್ವೀರ್ ಸೇಠ್ ಖಾತೆ ಬದಲಿಸುವಂತೆ ಹೇಳಿದರು.

ಸೆಲ್ಫಿ ಕ್ರೇಜ್

ನುಡಿ ಜಾತ್ರೆಯಲ್ಲಿ ಎಲ್ಲಿ ನೋಡಿದರೂ ಯುವ ಸಮೂಹ ಸೆಲ್ಫಿ ಚಿತ್ರ ತೆಗೆದುಕೊಳ್ಳುವಲ್ಲಿ ಬಿಜಿಯಾಗಿದ್ದರು. ಪುಸ್ತಕ ಮಳಿಗೆಗಳು, ವಿಚಾರಗೋಷ್ಠಿಗಳಲ್ಲಿ ಯುವ ಸಮೂಹ ವಿರಳವಾಗಿತ್ತು. ಆದರೆ, ಸೆಲ್ಫಿ ಕ್ರೇಜ್ ನಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳು ವೈರಲ್ ಆಗುತ್ತಿದ್ದು ಕನ್ನಡ ಜಾತ್ರೆ ಭರ್ಜರಿ ಪ್ರಚಾರ ಸಿಕ್ಕಿದೆ!

Related Articles

Leave a Reply

Your email address will not be published. Required fields are marked *

Back to top button