ಕ್ಯಾಂಪಸ್ ಕಲರವ

ವಿಜ್ಞಾನ ವಸ್ತು ಪ್ರದರ್ಶನಃ ಮಕ್ಕಳ ಪಾಠಕ್ಕೆ ಮನಸೋತ ಪಿಎಸ್ಐ ಮಹಾಂತೇಶ ಸಜ್ಜನ್

ಶಾಂತಿ ಸದನ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ

ಯಾದಗಿರಿಃ ನಗರದ ಹೈದ್ರಾಬಾದ್ ರಸ್ತೆಯಲ್ಲಿರುವ ಶಾಂತಿ ಸದನ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನವನ್ನು ಶನಿವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿತ್ತು. ನಗರ ಪೋಲಿಸ್ ಠಾಣೆಯ ಪಿಎಸ್‍ಐ ಮಹಾಂತೇಶ ಸಜ್ಜನ್ ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು.

ವಿಜ್ಞಾನ ವಸ್ತು ಪ್ರದರ್ಶನದಲ್ಲಿ 165 ಮಕ್ಕಳು ಸ್ವತಃ ತಾವೇ ತಯಾರಿಸಿದ 83 ಕ್ಕೂ ಹೆಚ್ಚು ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಪಾಲಕರು ಮತ್ತು ಜನತೆ ಪ್ರದರ್ಶನಕ್ಕೆ ಆಗಮಿಸಿ ಮಕ್ಕಳಿಂದ ವಿವರಣೆಯನ್ನು ಪಡೆದರು. ಪುಟ್ಟ ಮಕ್ಕಳು ಅತ್ಯಂತ ಉತ್ಸಾಹದಿಂದ ವಿಜ್ಞಾನ, ಗಣಿತ, ಜೀವಶಾಸ್ತ್ರ, ಬೌತಶಾಸ್ತ್ರ ಮತ್ತಿತರೆ ವಿಷಯಗಳಿಗೆ ಸಂಬಂಧಿಸಿದ ತರಹೇವಾರಿ ಮಾದರಿಗಳನ್ನು ಸಿದ್ಧಪಡಿಸಿದ್ದು ನೋಡುಗರ ಮನಸೂರೆಗೊಂಡವು.

ವಸ್ತು ಪ್ರದರ್ಶನದಲ್ಲಿ ಸಾರಿಗೆ, ಪ್ರಾಣಿಗಳು, ಸೋಲಾರ್, ಮಾನವನ ಅಂಗರಚನೆ, ಆಸ್ಪತ್ರೆ, ಪೋಲೀಸ್ ಸ್ಟೇಷನ್ ಬ್ಯಾಂಕ್, ಹೈಡ್ರಾಲಿಕ್ ಲಿಫ್ಟ್, ಹೆಲಿಕಾಪ್ಟರ್, ಪಾರ್ಕ, ಪ್ರಾಣಿಸಂಗ್ರಹಾಲಯ, ಮರುಭೂಮಿಯ ರಚನೆ, ಅರಣ್ಯ ಮಾದರಿ, ಋತುಮಾನಗಳು, ಜಲಪಾತ, ಜೀವಜಗತ್ತಿನ ಜೀವನ ಶೈಲಿ, ಗಾಳಿ, ನೀರು ಬೆಳಕಿನ ಕ್ರೀಯೆಯ ಮೂಲಗುಣಗಳು, ಪವನ ವಿದ್ಯುತ್, ಮಾದರಿ ನಗರ, ಗಣಿತದ ಸಿದ್ಧಾಂತಗಳು, ತೂಕ, ಅಳತೆ, ಬೆಳಕಿನ ಪ್ರತಿಫಲನ ಇಂತಹ ಹಲವಾರು ಮಾದರಿಗಳ ಬಗ್ಗೆ ಪುಟಾಣಿಗಳು ವಿವರಣೆಯನ್ನು ನೀಡಿದರು.

ಶಿಕ್ಷಣ ಸಂಸ್ಥೆಯ ಅದ್ಯಕ್ಷರಾದ ಸಾಹೇಬರೆಡ್ಡಿ ಬಕ್ಕಾ, ಕಾರ್ಯದರ್ಶಿ ಬಸವಂತರೆಡ್ಡಿ, ಶಾಲೆಯ ಮುಖ್ಯಗುರುಗಳು ಶಿಕ್ಷಕಿಯರು, ನಗರದ ಪ್ರಮುಖರು, ನೂರಾರು ಪಾಲಕರು, ಅಧಿಕಾರಿಗಳು, ಆಸ್ತಕರು ಭಾಗವಹಿಸಿದ್ದರು.

Related Articles

One Comment

  1. Good morning vinayavaani, I see every day everyone vinayavaani online news, so I thanks to vinayavaani cheaf editor.
    Thank you.

Leave a Reply

Your email address will not be published. Required fields are marked *

Back to top button