ನಾಡಿಗೆ ಮಠಮಾನ್ಯಗಳ ಕೊಡುಗೆ ಅಪಾರಃ ದರ್ಶನಾಪುರ
ಶ್ರೀಶೀಲವಂತೇಶ್ವರ ಹಿರೇಮಠ ಪುನರುತ್ಥಾನ ಕಾರ್ಯಕ್ಕೆ ಚಾಲನೆ
ಯಾದಗಿರಿಃ ಭಾರತೀಯ ಸಂಪ್ರದಾಯದಲ್ಲಿ ಮಠ ಮಾನ್ಯಗಳಿಗೆ ಅಂತ್ಯತ ಗೌರವವಿದೆ. ಮಠಾಧೀಶರು ಜನರ ಆಶೋತ್ತರಕ್ಕೆ ಸ್ಪಂಧಿಸುವ ಕಾರ್ಯ ಮಾಡುತ್ತಿವೆ. ಸಾಮಾಜಿಕ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದು, ಜನಹಿತ ಬಯಸುವ ಕಾರ್ಯಗಳನ್ನು ಮಾಡುತ್ತಾ ಬಂದಿವೆ ಎಂದು ಮಾಜಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ಹೇಳಿದರು.
ಜಿಲ್ಲೆಯ ಶಹಾಪುರ ನಗರದ ಗುತ್ತಿಪೇಟೆಯಲ್ಲಿರುವ ಶೀಲವಂತೇಶ್ವರ ಹಿರೇಮಠದ ಪುನರುತ್ಥಾನ ಅಂಗವಾಗಿ ಸ್ಥಳದಲ್ಲಿ ಮದ್ರಿಕಿ ಶೀಲವಂತೇಶ್ವರ ಸಂಸ್ಥಾನ ಹಿರೇಮಠ ವಿದ್ಯಾವರ್ಧಕ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಮಠ ಮಂದಿರಗಳು ಅನಾದಿಕಾಲದಿಂದಲೂ ದಾಸೋಹ ಮತ್ತು ಶೈಕ್ಷಣಿಕ ಸೌಲಭ್ಯವನ್ನು ಒದಗಿಸುತ್ತಾ ಬಂದಿವೆ. ಉತ್ತಮ ಸಮಾಜ ನಿರ್ಮಿಸುವಲ್ಲಿ ಅವರ ಮಾರ್ಗದರ್ಶನ ಅತ್ಯಗತ್ಯವಾಗಿದೆ. ಶೈಕ್ಷಣಿಕವಾಗಿ ಬಹು ದೊಡ್ಡ ಕ್ರಾಂತಿಯೇ ಮಠಮಾನ್ಯಗಳು ಕೈಗೊಂಡಿವೆ.
ನಾಡಿನಲ್ಲಿನ ಹಲವಾರು ಮಠಗಳು ಸರ್ಕಾರಗಳು ಮಾಡದ ಕೆಲಸವನ್ನು ಮಾಡುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯಂತ ಉನ್ನತ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿವೆ. ಶ್ರೀಮಠಗಳ ಗುರುವರ್ಯರು ಮತ್ತು ಶ್ರೀಮಠಗಳು ಸಮಾಜಕ್ಕೆ ಅತ್ಯಂತ ನಿಸ್ವಾರ್ಥ ಸೇವೆ ಸಲ್ಲಿಸಿದವುಗಳಾಗಿವೆ.
ನ್ಯಾಯ, ನೀತಿ ಬೋಧನೆ, ದಾಸೋಹ, ಧರ್ಮಗಳು ಉಳಿಸಿ ಬೆಳೆಸಿಕೊಂಡು ಬರುವಲ್ಲಿ ಮಠಮಾನ್ಯಗಳ ಕಾರ್ಯ ಎಂದಿಗೂ ಶ್ಲಾಘನೀಯವಾಗಿವೆ ಎಂದರು.
ವೇದಿಕೆ ಮೇಲೆ ಮದ್ರಿಕಿ ಹಿರೇಮಠದ ಶೀಲವಂತ ಶಿವಾಚಾರ್ಯರು, ಶ್ರೀಚರಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಬಸವಯ್ಯ ಶರಣರು, ಮಲ್ಲಿಕಾರ್ಜುನಯ್ಯಸ್ವಾಮಿ ಚಿಕ್ಕಮಠ, ಶಾಂತಯ್ಯ ಸ್ವಾಮಿ ಗಂಧದಮಠ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಬಸವರಾಜೇಂದ್ರ ದೇಶಮುಖ, ಉಪಾಧ್ಯಕ್ಷ ಮಲ್ಲಣ್ಣ ಮಡ್ಡಿ, ಕಸಾಪ ಅಧ್ಯಕ್ಷ ಸಿದ್ದಲಿಂಗಪ್ಪ ಆನೇಗುಂದಿ, ಮುಖಂಡ ಭೀಮಯ್ಯಗೌಡ ಕಟ್ಟಿಮನಿ, ಸುರೇಂದ್ರ ಪಾಟೀಲ ಮಡ್ನಾಳ, ಕೋಲಿ ಸಮಾಜದ ಮುಖಂಡ ಮಹಾದೇವಪ್ಪ ಸಾಲಿಮನಿ ಸೇರಿದಂತೆ ಇತರರಿದ್ದರು.
ಸಂಜನಾ ದೇಸಾಯಿ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಚೌದ್ರಿ ಸ್ವಾಗತಿಸಿದರು. ಶಿವುಕುಮಾರ ಕೊಲ್ಲೂರು ನಿರೂಪಿಸಿದರು. ನಗರಸಭೆ ಮಾಜಿ ಅಧ್ಯಕ್ಷ ನಾಗಪ್ಪ ತಹಸೀಲ್ದಾರ, ಸದಸ್ಯರಾದ ರಾಯಪ್ಪ ಸಾಲಿಮನಿ, ಪಿಡ್ಡಪ್ಪ ಹೆಡಗಿಮದ್ರಿ, ಶಿವಶರಣಪ್ಪ ಕಾಮಾ, ಭಗವಂತ ಬಳ್ಳೂಂಡಗಿ, ಬಸವರಾಜ ಹೇರುಂಡಿ, ಗುಂಡಪ್ಪ ತುಂಬಗಿ, ರವಿ ಮೋಟಗಿ, ಸುಧೀರ ಚಿಂಚೋಳಿ, ಸಿದ್ದರಾಮಪ್ಪ ಯಾಳಗಿ, ಭೀಮರಾಯ ಮಡಿವಾಳ, ಈಶ್ವರ ಬಾಸುತ್ಕರ್, ಶಿವಪ್ಪ ಹೂಗಾರ, ನಾಗರಾಜ ಹಡಪದ, ನಾಗಪ್ಪ ಬಾಳಿ, ಗುರುರಾಜ ಕಾಮಾ, ಶಿವುಕುಮಾರ ಬಿಲ್ಲಂಕೊಂಡಿಮಠ, ಚಂದ್ರು ಯಾಳಗಿ, ರವಿ ಎದುರುಮನಿ, ದೇವಿಂದ್ರಪ್ಪ ಹಿಟ್ನಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುಂಚಿತವಾಗಿ ಶ್ರೀಮಠದ ಭೂಮಿ ಪೂಜೆಯನ್ನು ದರ್ಶನಾಪುರ ಅವರು ನೆರವೇರಿಸಿದರು.