ಪ್ರಮುಖ ಸುದ್ದಿ
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗಿನ ಬಗ್ಗೆ ನಟ ಶಿವರಾಜಕುಮಾರ್ ಹೇಳಿದ್ದೇನು?
ಬೆಂಗಳೂರು: ನಮಗೆ ಗೊತ್ತಿರುವುದು ಅಖಂಡ ಕರ್ನಾಟಕ ಒಂದೇ. ಏನೇ ಸಮಸ್ಯೆಗಳಿದ್ದರೂ ಒಟ್ಟಾಗಿ ಬಗೆಹರಿಸಿಕೊಳ್ಳೋಣ. ಯಾವುದೇ ಕಾರಣಕ್ಕೂ ರಾಜ್ಯ ಇಬ್ಭಾಗವಾಗುವುದು ಬೇಡ ಅಂತ ನಟ ಶಿವರಾಜ ಕುಮಾರ್ ಮನವಿ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಕರ್ನಾಟಕ ಒಡೆಯುವುದು ಬೇಡ ಎಂಬುದು ನನ್ನ ಅಭಿಪ್ರಾಯ. ಆದರೆ. ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡುವವರಿಗೆ ಬುದ್ಧಿ ಹೇಳುವಷ್ಟು ದೊಡ್ಡವ ನಾನಲ್ಲ ಎಂದಿದ್ದಾರೆ.