ಪವರ್ TV ಬಂದ್ಃ ರಾಜ್ಯ ಸರ್ಕಾರದ ನಡೆಗೆ ಫೇಸ್ ಬುಕ್ ಲೈವ್ ನಲ್ಲಿ ನಿರೂಪಕ ರಹೆಮಾನ್ ಮಾತು
ಪವರ್ TV ಬಂದ್ಃ ರಾಜ್ಯ ಸರ್ಕಾರದ ನಡೆಗೆ ಫೇಸ್ ಬುಕ್ ಲೈವ್ ನಲ್ಲಿ ನಿರೂಪಕ ರಹೆಮಾನ್ ದುಃಖ ಭರಿತ ಖಂಡನೆ
ಬೆಂಗಳೂರಃ ಸಿಎಂ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರು ಭ್ರಷ್ಟಾಚಾರ ಮಾಡಿದ್ದಾರೆ ಎನ್ನಲಾದ ವರದಿ ಪ್ರಸಾರ ಮಾಡಿರುವ ಹಿನ್ನೆಲೆ ಕನ್ನಡ ಸುದ್ದಿ ವಾಹಿನಿ ‘ಪವರ್ ಟಿವಿ’ ವಿರುದ್ಧ ದೂರು ನೀಡಿದ್ದು, ನ್ಯಾಯಾಲಯದಿಂದ ತನಿಖೆ ಆದೇಶ ತಂದು ಪವರ್ ಟಿವಿ ಬಂದ್ ಮಾಡಲಾಗಿದೆ.
ಇದರ ಹಿಂದಿರುವ ರಾಜ್ಯ ಸರ್ಕಾರದ ನಡೆ ಪ್ರಶ್ನಿಸಿ ನೇರವಾಗಿ ಯಡಿಯೂರಪ್ಪನವರ ಹೆಸರು ಉಚ್ಛರಿಸಿ ನಿರೂಪಕ ರಹೆಮಾನ್ ಹಾಸನ್ ಫೇಸ್ ಬುಕ್ಲೈವ್ ಮೂಲಕ ಕಣ್ಣೀರಿಟ್ಟು ಆರೋಪಿಸಿದ್ದಾರೆ. ಅವರ ದುಃಖ ಭರಿತ ಧ್ವನಿ ಮೂಲಕವೇ ಪ್ರಶ್ನಿಸಿದ್ದಾರೆ.
FB ಲೈವ್ ನಲ್ಲಿ ಮಾತು ಮುಂದುವರೆಸಿದ ಅವರು, ಸರಳವಾಗಿ ಸೌಮ್ಯಯುತವಾಗಿಯೇ ಮಾತನಾಡುತ್ತಾ, ಪವರ್ ಟಿವಿ ರೇಡ್ ಆಗಿದೆ. ಸಿಸಿಬಿ ಪೊಲೀಸರು ಸರ್ಚ್ ವಾರಂಟ್ ಜೊತೆ ಬಂದಿದ್ದರು. ಅವರಿಗೆ ಬೇಕಾದ ಎಲ್ಲಾ ಡಾಕ್ಯುಮೆಂಟ್ ಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೆ ನಮ್ಮ ಫೇಸ್ ಬುಕ್ ಲೈವ್ ನ್ನು ಸ್ಟಾಪ್ ಮಾಡಿದ್ದಾರೆ ಅದ್ಯಾವ ಕಾರಣಕ್ಕೆ.? ಎಂದ ಅವರು,
ನಮ್ಮ ಪವರ್ ಟಿವಿ ಸಂಸ್ಥೆ ಮೇಲೇ ಪ್ರಕರಣ ದಾಖಲಿಸಿ, ತನಿಖೆ ನಡೆಸಲಿ ಬೇಡ ಅಂದಿಲ್ಲ. ತನಿಖೆಗೆ ನಾವು ಸಿದ್ಧರಿದ್ದೀವಿ ಯಡಿಯೂರಪ್ಪನವ ಪುತ್ರ ವಿಜಯೇಂದ್ರ ನಡೆಸಿರುವ ಭ್ರಷ್ಟಾಚಾರ ಕುರಿತು ವರದಿ ಮಾಡಿದ್ದೀವಿ. ನಾವು ಸತ್ಯವಾದದನ್ನೆ ಮಾಡಿದ್ದೀವಿ. ವಿಜಯೇಂದ್ರರ ವಿರುದ್ಧ ಧ್ವನಿ ಎತ್ತುವದನ್ನು ಮುಂದುವರೆಸುತ್ತೇವೆ ಎಂದಿದ್ದಾರೆ.
ಅಲ್ಲದೆ ಯಡಿಯೂರಪ್ಪನವರೇ ನಾವು ನಿಮ್ಮನ್ನ ಒಬ್ಬ ಉತ್ತಮ ಆಡಳಿತಗಾರ, ರಾಜಾಹುಲಿ ಅಂತೆಲ್ಲ ಕರೆದಿದ್ದೀವೆ. ಆದರೆ ನಿಮ್ಮ ಕುಟುಂಬದವರಿಂದಲೇ ನೀವು ಹಾಳಾಗುತ್ತೀದ್ದೀರಿ ಎಂದು ಎಚ್ಚರಿಸಿರುವದು ತಪ್ಪಾ.? ನಮ್ಮ ಕರ್ತವ್ಯ ನಾವು ಮಾಡಿದ್ದೇವೆ.
ಆದರೆ ವಿಜಯೇಂದ್ರರ ಭ್ರಷ್ಟಾಚಾರ ಕುರಿತು ಮಾಡಿದ ಸುದ್ದಿಗೆ ನಮ್ಮ ಸಂಸ್ಥೆ ಮೇಲೆ, ಅಧಿಕಾರ ಇದೆ ಎಂದು ಹೀಗೆ ಮಾಡುಬಹುದಾ ಸರಿನಾ ಯಡಿಯೂರಪ್ಪ ನವರೇ..? ಸರಿ ಸರ್ಚ್ ವಾರಂಟ್ ಬಂದಿದೆ, ತನಿಖೆ ನಡೆಯುತ್ತೆ ಓಕೆ ಆದರೆ ನಮ್ಮ ಸಂಸ್ಥೆ ಯಾಕೆ ಬಂದ್ ಮಾಡಿಸಿದ್ದೀರಿ.?
250 ಜನ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆ. ಎಲ್ಲರೂ ಬೀದಿಗೆ ಬಂದಿದ್ದೇವೆ. ನಾವು ಸತ್ಯಕ್ಕಾಗಿ ಧ್ವನಿ ಎತ್ತಿದ್ದೇವೆ. ಇವತ್ತು ನಮ್ಮ ಕುಟುಂಬಗಳನ್ನು ಬೀದಿಗೆ ತಂದಿದ್ದೀರಿ. ನಿಮಗೇನು ಮಾಡಿದ್ದೇವೆ ಎಂದು ಅವರು ವಿಡಿಯೋ ಲೈವ್ ನಲ್ಲಿ ಕಣ್ಣೀರಿಟ್ಟು ಪ್ರಶ್ನಿಸಿದ್ದಾರೆ. ಮತ್ತು ಉಳಿದ ಚಾನಲ್ ಮಾಧ್ಯದವರು ಐವತ್ತು ನಾವೆಲ್ಲ ನಿಮ್ಮ ಜೊತೆಗಿದ್ದೇವೆ ಎಂದಿದ್ದೀರಿ. ನೀವೇನ್ ಮಾಡ್ತೀರೋ ನಿಮಗೆ ಬಿಟ್ಟಿದ್ದು, ಇಂದು ಠಾಣೆಗೆ ನನಗೆ ಕರೆದೊಯ್ದಾಗ ಮಾಧ್ಯಮದವರೆಲ್ಲರೂ ನಿಮ್ಮ ಜೊತೆ ಇದ್ದೇವೆ ಎಂದಿದ್ದಕ್ಕೆ ಧನ್ಯವಾದಗಳು ಅರ್ಪಿಸಿದರು.