ಪ್ರಮುಖ ಸುದ್ದಿ
ಕರ್ತವ್ಯ ಲೋಪ ಮುಖ್ಯಗುರು ಅಮಾನತು
ಯಾದಗಿರಿಃ ಕರ್ತವ್ಯ ಲೋಪ ಎಸಗಿರುವ ಹಿನ್ನಲೆಯಲ್ಲಿ ತಾಲೂಕಿನ ಮುಂಡರಗಿ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯಗುರು ಅಮಾನತು ಮಾಡಿ ಇಲ್ಲಿನ ಡಿಡಿಪಿಐ ಶ್ರೀಶೈಲ ಬಿರಾದಾರ ಆದೇಶ ಹೊರಡಿಸಿದ್ದಾರೆ.
ತಾಲೂಕಿನ ಮುಂಡರಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮುಖ್ಯ ಗುರುವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕನಕಪ್ಪ ಎಂಬುವರೇ ಅಮಾನತು ಆಗಿದ್ದಾರೆ.
ವಿದ್ಯಾರ್ಥಿ ವೇತನ ಕಾರ್ಯದಲ್ಲಿ ಇವರು ವಿಫಲತೆ ಹೊಂದಿದ್ದೆ ಮುಖ್ಯ ಕಾರಣವೆಂದು ಹೇಳಲಾಗುತ್ತಿದ್ದು, ನಿರ್ದಿಷ್ಠ ಕಾರಣಗಳು ಇನ್ನು ತಿಳಿದು ಬಂದಿಲ್ಲ. ಇವರ ಕಾರ್ಯವೈಖರಿ ಕುರಿತು ಸಾಕಷ್ಡು ದೂರುಗಳು ಕೇಳಿ ಬಂದಿದೆ ಎನ್ನಲಾಗಿದೆ.