ಪ್ರಮುಖ ಸುದ್ದಿ
ಕೊರೊನಾಃ ಭ್ರಷ್ಟಾಚಾರ ನಡೆದಿಲ್ಲವೆ.? ತನಿಖೆ ಎದುರಿಸಲು ಭಯವೇಕೆ.? ಸಿದ್ರಾಮಯ್ಯ ಪ್ರಶ್ನೆ
ಕೊರೊನಾಃ ಭ್ರಷ್ಟಾಚಾರ ನಡೆದಿಲ್ಲವೆ.? ತನಿಖೆ ಎದುರಿಸಲು ಭಯವೇಕೆ.? ಸಿದ್ರಾಮಯ್ಯ ಪ್ರಶ್ನೆ
ಬೆಂಗಳೂರಃ ಕೊರೊನಾ ಪರಿಸ್ಥಿತಿ ನಿರ್ವಹಣೆ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ವ್ಯಾಪಕ ಭ್ರಷ್ಟಚಾರ ನಡೆದಿದೆ.
ಭ್ರಷ್ಟಾಚಾರ ನಡೆದಿಲ್ಲ ಎಂದಾದರೆ ನ್ಯಾಯಂಗ ತನಿಖೆಗೆ ಒಪ್ಪಿಸಲು ಭಯವೇಕೇ ಎಂದು ವಿಪಕ್ಷ ನಾಯಕ ಸಿದ್ರಾಮಯ್ಯ ಸರ್ಕಾರಕ್ಕೆ, ಸಿಎಂ ಯಡಿಯೂರಪ್ಪರನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವಿಟರ್ ನಲ್ಲಿ ಸಹ ಅವರು ಬರೆದುಕೊಂಡಿದ್ದಾರೆ. ಕೂಡಲೇ ಸರ್ಕಾರ ಈ ಕುರಿತು ತನಿಖೆಗೆ ಒಳಪಡಿಸುವ ಮೂಲಕ ತಪ್ಪಿತಸ್ಥರನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.