ಪ್ರಮುಖ ಸುದ್ದಿ

ನಿಗಮ‌ ವಿಚಾರಃ ನಮ್ಮ ವಿರೋಧವಿಲ್ಲ, ರಾಜಕೀಯ ಲಾಭಕ್ಕೆ ಈ ಕಸರತ್ತು ಬೇಡ – ಸಿದ್ರಾಮಯ್ಯ

ನಿಗಮ‌ ರಚನೆಗೆ ನಮ್ಮ ವಿರೋಧವಿಲ್ಲ, ರಾಜಕೀಯ ಲಾಭಕ್ಕೆ ಈ ಕಸರತ್ತು ಬೇಡ – ಸಿದ್ರಾಮಯ್ಯ

ಬೆಂಗಳೂರಃ ಮರಾಠ, ವೀರಶೈವ-ಲಿಂಗಾಯತ ನಿಗಮ ಮಂಡಳಿ ರಚನೆ ಕೇವಲ ರಾಜಕೀಯ ಲಾಭಕ್ಕಾಗಿ ಮಾಡಬೇಡಿ, ಮೇಲ್ವರ್ಗದ ಸಮುದಾಯಗಳಲ್ಲೂ ಬಡವರಿದ್ದಾರೆ ಅಂತವರ ಏಳ್ಗೆಗಾಗಿ ಯೋಜನೆಗಳನ್ನು ರೂಪಿಸಿ ಎಂದು ವಿಪಕ್ಷ ನಾಯಕ ಸಿದ್ರಾಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹಿರಾತು

ನಿಗಮ ರಚನೆ ಕುರಿತು ಮಾಧ್ಯಮ ಪ್ರಕಟಣೆ ನೀಡಿದ ಅವರು, ನಮ್ಮ ಸರ್ಕಾರವಿದ್ದಾಗ ನಿಗಮ ರಚನೆ, ಲಿಂಗಾಯತ ಸಮುದಾಯದ ಅಭಿವೃದ್ಧಿಗೆ ಯೋಜನೆ ರೂಪಿಸಲು ಚಿಂತನೆ ನಡೆಸಿದಾಗ ಇದೇ ಬಿಜೆಪಿಯವರು ವಿರೋಧ ವ್ಯಕ್ತಪಡಿಸಿದರು. ಸಮುದಾಯವನ್ನು ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇದೀಗ ವೈಜ್ಞಾನಿಕವಾಗಿ ಅಧ್ಯಯನ ನಡೆಸದೆ ನಿಗಮ ರಚನೆಗೆ ಮುಂದಾಗಿರುವದು ಯಾವ ಸಾಧನೆಗೆ.? ಎಂದು ಪ್ರಶ್ನಿಸಿದ ಅವರು, ಮರಾಠರು ಮತ್ತು ಕನ್ನಡಿಗರ ನಡುವೆ ಆಗಾಗ ಗದ್ದಲಗಳು ನಡೆಯುತ್ತಿದ್ದವು ಆದರೂ ಸಾಮರಸ್ಯದಿಂದ ಬಾಳುತಿದ್ದರು ಈಗ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ಕಿರಿಕಿರಿಗೆ ದಾರಿ ಮಾಡಿಕೊಟ್ಟಿದ್ದಾರೆ ಎಂದು ಟೀಕಿಸಿದ್ದಾರೆ.

ಕನ್ನಡ ಮತ್ತು ಮರಾಠ ಸಮುದಾಯಗಳ ಮಧ್ಯ ಕಿಡಿ ಹೊತ್ತಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button