ಪ್ರಮುಖ ಸುದ್ದಿ
SNAKE BITE : ಸುರಪುರದಲ್ಲಿ ರೈತ ಮಹಿಳೆ ಸಾವು!
ಯಾದಗಿರಿ: ಸುರಪುರ ತಾಲೂಕಿನ ಬೈರಿಮಡ್ಡಿ ಗ್ರಾಮದ ಸಮೀಪ ಜಮೀನಿಗೆ ಕೃಷಿ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ವಿಷಪೂರಿತ ಹಾವು ಕಡಿದು ದೇವಮ್ಮ(22) ಎಂಬ ರೈತ ಮಹಿಳೆ ಅಸುನೀಗಿದ ಘಟನೆ ನಡೆದಿದೆ. ಹಾವು ಕಡಿತದಿಂದಾಗಿ ತೀವ್ರ ಅಸ್ವಸ್ಥಳಾಗಿದ್ದ ದೇವಮ್ಮಳನ್ನು ಸಂಭಂಧಿಕರು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆಯೇ ದೇವಮ್ಮ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.