ಶಹಾಪುರಃ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರ, ಹಲವಡೆ ವಿದ್ಯಾರ್ಥಿಗಳಿಗೆ ಸಿಹಿ, ಹೂಗುಚ್ಛ ನೀಡಿ ಸ್ವಾಗತಿಸಿ ಶುಭಕೋರಿಕೆ
ವಿದ್ಯಾರ್ಥಿಗಳಿಗೆ ಸಿಹಿ, ಹೂಗುಚ್ಛ ನೀಡಿ ಸ್ವಾಗತ
ಶಹಾಪುರಃ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರ
ತಾಲೂಕಿನಾದ್ಯಂತ 21 ಕೇಂದ್ರ, ಒಟ್ಟು ವಿದ್ಯಾರ್ಥಿಗಳು 4964, ಹಾಜರಾದವರು 4829, ಗೈರು 142
ವಿನಯವಾಣಿ
ಶಹಾಪುರಃ ವಿದ್ಯಾರ್ಥಿ ಬದುಕಿನಲ್ಲಿ ಪ್ರಮುಖ ಘಟ್ಟವೆಂದು ಹೇಳಲಾಗುತ್ತಿರುವ ಪ್ರಸಕ್ತ ವರ್ಷದ ಎಸ್ಸೆಸ್ಸೆಲಿ ಪರೀಕ್ಷೆ ಮೊದಲ ದಿನವಾದ ಬುಧವಾರ ತಾಲೂಕಿನಾದ್ಯಂತ ಸುಸೂತ್ರವಾಗಿ ನಡೆದಿದೆ ಎಂದಿದೆ ಪ್ರಭಾರಿ ಬಿಇಓ ಎಚ್.ಎಸ್.ಸೋಮಾಪುರ ತಿಳಿಸಿದರು.
ತಾಲೂಕಿನಾದ್ಯಂತ ಒಟ್ಟು 21 ಪರೀಕ್ಷಾ ಕೇಂದ್ರಗಳನ್ನು ಸಿದ್ಧತೆ ಮಾಡಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಒಟ್ಟು ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳು 4964 ಆದರೆ ಪರೀಕ್ಷೆಗೆ ಹಾಜರಾದ ಸಂಖ್ಯೆ 4829 ವಿದ್ಯಾರ್ಥಿಗಳು, ಗೈರು ಹಾಜರಾದವರು 142 ವಿದ್ಯಾರ್ಥಿಗಳು. ಒಟ್ಟಾರೆ ಎಲ್ಲಾ ಕೇಂದ್ರಗಳಲ್ಲಿ ಯಾವುದೇ ತೊಂದರೆಯಾಗದೆ ವಿದ್ಯಾರ್ಥಿಗಳು ಸುಸೂತ್ರವಾಗಿ ಪರೀಕ್ಷೆಯನ್ನು ಎದುರಿಸಿದ್ದಾರೆಂದು ಅವರು ಮಾಹಿತಿ ನೀಡಿದರು.
ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇಡಿ ಪರೀಕ್ಷಾ ವ್ಯವಸ್ಥೆ ಮೇಲೆ ನಿಗಾವಹಿಸಲು ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳು ಸೇರಿದಂತೆ ಉನ್ನತ ಅಧಿಕಾರಿಗಳ ತಂಡ ಕಣ್ಗಾವಲಿನಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ಪ್ರತಿ ಕೇಂದ್ರದಲ್ಲಿ ಮಕ್ಕಳಗೆ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ ಸೇರಿದಂತೆ ಪ್ರತಿ ಕೋಣೆಗಳಿಗೆ ಫ್ಯಾನ್ಗಳ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ವಿವರಿಸಿದರು. ಪ್ರತಿ ಪರೀಕ್ಷಾ ಕೇಂದ್ರದ ಸುತ್ತಲೂ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಹಲವಡೆ ಮಕ್ಕಳಿಗೆ ಸಿಹಿ, ಹೂ ನೀಡಿ ಸ್ವಾಗತ
ಶಹಾಪುರಃ ತಾಲೂಕಿನಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಆಗಮಿಸಿದ ಮಕ್ಕಳಿಗೆ ಸಿಹಿ ತಿಂಡಿ ಮತ್ತು ಹೂಗುಚ್ಛ ನೀಡಿ ಸ್ವಾಗತಿಸುವ ಮೂಲಕ ವಿನೂತನವಾಗಿ ಮಕ್ಕಳಲ್ಲಿನ ಆತಂಕ ಹೋಗಲಾಡಿಸುವ ಜತೆಗೆ ಶಾಂತಚಿತ್ತ ಸಂತಸದೊಂದಿಗೆ ಪರೀಕ್ಷೆ ಎದುರಿಸಲು ಶುಭಕೋರುವ ಮೂಲಕ ವಿನೂತ ಕಾರ್ಯಕ್ರಮವನ್ನು ಈ ಬಾರಿ ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಂಘದ ಸಹಯೋಗದೊಂದಿಗೆ ನಡೆಯಿತು.
ನಗರದ ಆದರ್ಶ ವಿದ್ಯಾಲಯ ಪರೀಕ್ಷಾ ಕೇಂದ್ರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಾಜರಾಗಲು ಬಂದ ವಿದ್ಯಾರ್ಥಿಗಳಿಗೆ ಇಲ್ಲಿನ ಶಿಕ್ಷಕರು ಹೂಗುಚ್ಛ ನೀಡಿ ಸಿಹಿ ತಿಂಡಿ ಸ್ವಾಗತಿಸುವ ಮೂಲಕ ಶುಭ ಕೋರಿದರು. ಇದರಂತೆ ನಗರದ ಹಲವು ಕೇಂದ್ರಗಳಲ್ಲಿಯೂ ಪ್ರೌಢ ಶಾಲಾ ಶಿಕ್ಷಕರ ಸಂಘದಿಂದ ವ್ಯವಸ್ಥೆ ಮಾಡಲಾಗಿದೆ ಎಂದು ಶಿಕ್ಷಕರು ತಿಳಿಸಿದರು. ಪರೀಕ್ಷೆ ಕೇಂದ್ರಕ್ಕೆ ಆಗಮಿಸಿ ವಿದ್ಯಾರ್ಥಿಗಳಿಗೆ ಸ್ವಾಗತಿಸುವ ವಿನೂತನ ಕಾರ್ಯದಿಂದ ಪಾಲಕರಿಗೂ ಖುಷಿ ತಂದಿತು. ಈ ಸಂದರ್ಭದಲ್ಲಿ ಪ್ರಭಾರಿ ಬಿಇಓ ಎಚ್.ಎಸ್.ಸೋಮಾಪುರ, ಸಂಘದ ಅಧ್ಯಕ್ಷ ಭೀಮಣ್ಣಗೌಡ ತಳೆವಾಡ, ಶಿಕ್ಷಕರ ಸಂಘದ ಪ್ರಶಾಂತ ಯಾಳಗಿ ಸೇರಿದಂತೆ ಮುಖ್ಯ ಅಧೀಕ್ಷಕ ಮಲ್ಲಿಕಾರ್ಜುನ ಭಾಸುತ್ಕರ್ ಹಾಗೂ ಶಾಲಾ ಸಿಬ್ಬಂದಿ ವರ್ಗ ಇದ್ದರು.
ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದೊಳಗೆ ಸಾಗುತ್ತಿರುವ ವಿದ್ಯಾರ್ಥಿಗಳು
ವಿದ್ಯಾರ್ಥಿಗಳಿಂದ ತಮ್ಮ ಕೋಣೆ ಸಂಖ್ಯೆ ಹುಡುಕಾಟಶಹಾಪುರಃ ನಗರದ ಆದರ್ಶ ವಿದ್ಯಾಲಯ ಸೇರಿದಂತೆ ತಾಲೂಕಿನ ಸಗರ ಗ್ರಾಮದ ಪರೀಕ್ಷಾ ಕೇಂದ್ರದಲ್ಲೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷಾ ಕೀಣೆಗೆ ತೆರಳುವ ಮುಂಚೆ, ಕೇಂದ್ರ ಮುಂದೆ ತಮ್ಮ ನೋಂದಣಿ ಸಂಖ್ಯೆ ಜೊತೆಗೆ ಯಾವ ಕೋಣೆಯಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ ಎಂಬುದನ್ನು ಹುಡುಕುವ ತವಕದಲ್ಲಿರುವದು ಕಾಣಬಹುದು.
ಸಮರ್ಪಕ ಕೋಣೆ ಗುರುತಿಸಿಕೊಂಡು ಆಯಾ ಕೋಣೆಯಲ್ಲಿ ಪರೀಕ್ಷೆ ಎದುರಿಸಲು ಮಕ್ಕಳು ಅಣಿಯಾದರು. ಒಟ್ಟರೆ ವಿದ್ಯಾರ್ಥಿಗಳು ತಮ್ಮ ಬದುಕಿನ ಭವಿಷ್ಯದ ಮೊದಲ ಪರೀಕ್ಷೆಯ ಮೊದಲ ದಿನ ಎದುರಿಸಿದರು..




