ಪ್ರಮುಖ ಸುದ್ದಿ
ನಾಳೆ ಎಲ್ಲಾ ಮಾಹಿತಿ ನೀಡುವೆ-ಡಿಕೆಶಿ
ದೆಹಲಿಃ ತಿಹಾರ ಜೈಲಿಂದ ಹೊರಗಡೆ ಬರುತ್ತಿದ್ದಂತೆ ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ, ನನ್ನ ಪರವಾಗಿ ಹೋರಾಟ ಮಾಡಿದ ಎಲ್ಲಾ ಕಾರ್ಯಕರ್ತರಿಗೂ, ವಕೀಲರಿಗೂ ಮೊದಲನೇಯದಾಗಿ ಧನ್ಯವಾದ ಅರ್ಪಿಸಿದ ಅವರು,
ನಾಳೆ ಎಲ್ಲವೂ ಮಾಧ್ಯಮಕ್ಕೆ ಮಾಹಿತಿ ನೀಡುವೆ ಎಂದು ಕೈಮುಗಿದು ನಡೆದರು. ಈ ಸಂದರ್ಭದಲ್ಲಿ ಡಿಕೆಶಿ ಸಹೋದರ ಡಿಕೆ ಸುರೇಶ ಸೇರಿದಂತೆ ಪ್ರಮುಖರು ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ಹಾಜರಿದ್ದರು. ಈ ವೇಳೆ ಡಿಕೆಶಿ ಹೊರಬಂದಿರುವ ಸಂತೋಷಕ್ಕೆ ಸ್ವೀಟ್ ಹಂಚಿ ಹರ್ಷ ವ್ಯಕ್ತಪಡಿಸಲಾಯಿತು.