ಪ್ರಮುಖ ಸುದ್ದಿ
ರೌಡಿಶೀಟರ್ ಬುಳ್ಳ ನಾಗನ ಹತ್ಯೆಗೆ ಯತ್ನಿಸಿದ ಸುಪಾರಿ ಕಿಲ್ಲರ್ಸ್!
ಬೆಂಗಳೂರು: ರೌಡಿ ಶೀಟರ್ ಬುಳ್ಳ ನಾಗನ ಮೇಲೆ ರೌಡಿ ಗುಂಪೊಂದು ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಘಟನೆ ರಾಣೇಬೆನ್ನೂರು ಬಳಿ ನಡೆದಿದೆ. ಹತ್ತಕ್ಕೂ ಹೆಚ್ಚು ಜನರಿದ್ದ ತಂಡ ಬುಳ್ಳಾ ನಾಗನನ್ನು ಬೆನ್ನು ಹತ್ತಿ ಬಂದು ತುಂಗಭದ್ರಾ ಸೇತುವೆ ಬಳಿ ತಡೆದು ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ. ಪರಿಣಾಮ ಬುಳ್ಳಾನಾಗ ಸೇರಿ ನಾಲ್ವರು ತೀವ್ರ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರೌಡಿಶೀಟರ್ ಗಳಾದ ಸೀನ, ಗೋವಿಂದ ಮತ್ತು ಕನಮಾ ಎಂಬುವವರ ಮೇಲೆ ಬುಳ್ಳ ನಾಗ ಹತ್ಯೆಗೆ ಯತ್ನ ಆರೋಪ ಮಾಡಿದ್ದಾನೆ. ಸುಪಾರಿ ಕಿಲ್ಲರ್ ಗಳ ಮೂಲಕ ನನ್ನ ಕೊಲೆಗೆ ಯತ್ನಿಸಲಾಗಿದೆ ಎಂದು ಆರೋಪಿಸಿ ರೌಡಿ ಶೀಟರ್ ಬುಳ್ಳ ನಾಗ ಪೊಲೀಸರಿಗೆ ದೂರು ನೀಡಿದ್ದಾನೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.