ಪ್ರಮುಖ ಸುದ್ದಿ

ಕೆರೆ ಪ್ರಕರಣಃ ದೊರೆಯದ ಮೃತದೇಹ, ನಾಳೆ ಶೋಧಕಾರ್ಯ ಮುಂದುವರಿಕೆ

ಮೃತದೇಹ ಪತ್ತೆಗೆ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ

ಕತ್ತಲು ಆವರಿಸಿದ ಹಿನ್ನೆಲೆ ಶೋಧಕಾರ್ಯ ಸ್ಥಗಿತ

ಯಾದಗಿರಿ, ಶಹಾಪುರಃ ಕೆರೆಯಲ್ಲಿ ಈಜಲು ತೆರಳಿದ್ದ ಯುವಕನೋರ್ವ ನೀರಿನ ಮಡುವಿನಲ್ಲಿ ಸಿಲುಕಿ ಸಾವನ್ನಪ್ಪಿದ ಘಟನೆ ನಗರದ ನಾಗರ ಕೆರೆಯಲ್ಲಿ ಗುರುವಾರ 11 ಗಂಟೆ ಸುಮಾರಿಗೆ ನಡೆದಿದೆ.

ಬಾಬಾ ಸೆಂಟ್ರಿಂಗ್ (38) ಎಂಬಾತನೇ ಕೆರೆಯ ನೀರಲ್ಲಿ ಮುಳುಗಿ ಮೃತಪಟ್ಟ ದುರ್ದೈವಿ. ಪಟ್ಟಣದ ಜಾಲಗಾರ ಮೊಹಲ್ಲಾದ ನಿವಾಸಿ ಎನ್ನಲಾಗಿದ್ದು, ಬೆಳಗ್ಗೆ ಕೆರೆಯಲ್ಲಿ ಹಲವಾರು ಜನ ಈಜಾಡುತ್ತಿದ್ದ ವೇಳೆ ಈತನು ಈಜಾಡಿದ್ದು, ಮೂರನೇ ಬಾರಿ ಈಜುತ್ತು ಮುಂದೆ ಸಾಗುವ ವೇಳೆ ಮುಳುಗಿದ್ದಾನೆ.

ಸುದ್ದಿ ತಿಳಿದ ಸಂಬಂಧಿಕರು, ಕುಟುಂಬಸ್ಥರು ತಕ್ಷಣ ಕೆರೆಗೆ ಆಗಮಿಸಿ ಆತನ ಬಟ್ಟೆ ಬರೆ ನೋಡಿ ಗುರುತಿಸಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹ ಪತ್ತೆಗೆ ಅಗ್ನಿ ಶಾಮಕ ದಳದ ಸಿಬ್ಬಂದಿಯನ್ನು ಕರೆಸಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಮೃತದೇಹ ಪತ್ತೆಗೆ ಹರಸಾಹಸ ಪಟ್ಟರು.

ಶೋಧಕಾರ್ಯ ಹೀಗೆ ತಡ ಸಂಜೆವರೆಗೆ ನಡೆದರೂ ಶವ ಮಾತ್ರ ಪತ್ತೆಯಾಗಿಲ್ಲ. ಕತ್ತಲಾದ ಪರಿಣಾಮ ಪೊಲೀಸರು ಶೋಧ ಕಾರ್ಯವನ್ನು ಸ್ಥಗಿತಗೊಳಿಸಿದ್ದು, ಶುಕ್ರವಾರ ಬೆಳಗ್ಗೆ ಮತ್ತೇ ಮುಂದುವರೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

—————————
ಬೆಳಗ್ಗೆಯಿಂದ ಮೃತದೇಹ ಪತ್ತೆಗೆ ಶೋಧಕಾರ್ಯ ಜೋರಾಗಿಯೇ ನಡೆದಿದ್ದು, ಮೃತದೇಹ ಪತ್ತೆಯಾಗಿರುವದಿಲ್ಲ. ಕತ್ತಲಾದ ಪರಿಣಾಮ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದೆ. ಬೆಳಗ್ಗೆ ಮತ್ತೇ ಅಗ್ನಿಶಾಮಕ ದಳದ ಸಿಬ್ಬಂದಿ ಪೊಲೀಸರು ಶೋಧಕಾರ್ಯ ಮುಂದುವರೆಸಲಿದ್ದಾರೆ. ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

-ನಾಗರಾಜ ಜಿ. ಸಿಪಿಐ ಶಹಾಪುರ.

Related Articles

Leave a Reply

Your email address will not be published. Required fields are marked *

Back to top button