ಪ್ರಮುಖ ಸುದ್ದಿ

ಬಜೇಟ್ ವರ್ಷಕ್ಕೆ 6000 ರೂ. ರೈತರ ಖಾತೆಗೆ ನೇರ ಜಮೆ

ಪಿಯೂಷ್ ಗೋಯಲ್ ರಿಂದ ಚೊಚ್ಚಲ‌ ಬಜೆಟ್ ಮಂಡನೆ-2019-20

ದೆಹಲಿಃ ಭ್ರಷ್ಟಾಚಾರದ ವಿರುದ್ಧ ಪಾರದರ್ಶಕ ಕ್ರಮಗಳನ್ನು ಕೈಗೊಂಡಿದೆ.
ಹಣ ದುಬ್ಬರ ದರ ನಿಯಂತ್ರಣ ಮಾಡಿದ್ದೇವೆ. ಬೆಲೆ ಏರಿಕೆ ತಡೆಗಟ್ಟುವಲ್ಲಿ ಸಫಲರಾಗಿದ್ದೇವೆ ಎಂದು ಹಣಕಾಸು ಮಂತ್ರಿ‌ ಜವಬ್ದಾರಿ ಹೊತ್ತ ಪಿಯೂಶ್ ಗೋಯಲ್ ತಿಳಿಸಿದ್ರು.

ಕಳೆದ ಐದು ವರ್ಷದಲ್ಲಿ ಭಾರತ ಪ್ರಕಾಶಿಸುತ್ತಿದೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ.

ಎಲ್ಲಾ ವರ್ಗಗಳಿಗೂ ಮೀಸಲಾತಿ ನೀಡುವ ಮೂಲಕ ಸಮಾನತೆಗೆ ಆದ್ಯತೆ.
ಕಲ್ಲಿದ್ದಲ್ಲು ತರಂಗಾಂತರವನ್ನು ಸದ್ಭಳಿಕೆ ಮಾಡಿಕೊಳ್ಳಲಾಗಿದೆ. ಆರ್ಥಿಕ ವಲಯದಲ್ಲಿ ಭಾರತ 6 ನೇ ಸ್ಥಾನ‌ ಪಡೆದಿದೆ.

2019-20 ನೇ ಸಾಲಿನಲ್ಲಿ 60 ಸಾವಿರ ಕೋಟಿ ಅನುದಾನಯುತ ಯೋಜನೆ ರೂಪಿಸಲಾಗಿದೆ.

ಆರ್ ಬ್ಯಾಂಕ್ ಗಳ‌ ಸ್ಥಿತಿಯನ್ನು ಮುಂದಿಟ್ಟಿದ್ದೆವೆ. ಗ್ರಾಮೀಣ‌ ಭಾಗದ ರಸ್ತೆ ಸುಧಾರಣೆಗೆ 19 ಸಾವಿರ ಕೋಟಿ ಮೀಸಲಿಡಲಾಗಿದೆ.

ಭಾರತದಲ್ಲಿ 5 ಲಕ್ಷ‌ 43 ಸಾವಿರ‌ ಗ್ರಾಮಗಳು ಬಯಲು ಶೌಚ‌ದಿಂದ‌ ಮುಕ್ತವಾಗಿವೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಆರಂಭ. ಇದರಿಂದ ಪ್ರತಿ ರೈತರ ಖಾತೆಗೆ 6 ಸಾವಿರ ಹಣ ಸಂದಾಯವಾಗಲಿದೆ.

2018 ರಿಂದಲೇ ಈ ಯೋಜನೆ ಜಾರಿ. 12 ಕೋಟಿ ರೈತ ಕುಟುಂಬಗಳಿಗೆ ಇದು ಲಾಭವಾಗಲಿದೆ. ಎಲ್ಲಾ ರೈತರಿಗೂ ನೇರ ಆದಾಯ ಸಿಗಲೆಂದು ಈ ಯೋಜನೆ ಜಾರಿ‌ ಮಾಡಲಾಗಿದೆ ಎಂದು ಗೋಯಲ್ ತಿಳಿಸಿದರು.

ಈ ಸಂದರ್ಭದಲ್ಲಿ ಸಂಸತ್ತಿನಲ್ಲಿ‌ ಮೇಜು ಕುಟ್ಟಿ ಸ್ವಾಗತಿಸಲಾಯಿತು. ಎಲ್ಲಾ ರೈತರಿಗೆ ನೇರ ಅವರ ಖಾತೆ‌ಗೆ ಹಣ‌ ಸಂದಾಯವಾಗಲಿದೆ.

Related Articles

Leave a Reply

Your email address will not be published. Required fields are marked *

Back to top button