ಪ್ರಮುಖ ಸುದ್ದಿ

ಚಾಕು ಹಾಕಿದ ಆರೋಪಿ ಹೇಳಿದ್ದೇನು ಗೊತ್ತಾ..?

 

ಬೆಂಗಳೂರ: ಇತ್ತೀಚೆಗೆ ನಗರದ ಲೋಕಾಯುಕ್ತ ಕಚೇರಿಗೆ ತೆರಳಿ ಲೋಕಾಯುಕ್ತ ನ್ಯಾಯ ಮೂರ್ತಿ ವಿಶ್ವನಾಥ ಶೆಟ್ಟಿ ಅವರಿಗೆ ಚಾಕು ಇರಿದು ಕೊಲೆ ಯತ್ನಕ್ಕೆ ಪ್ರಯತ್ನಿಸಿದ ಆರೋಪಿ ತೇಜರಾಜ್ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದು, ಕೊಲೆಯತ್ನಕ್ಕೆ ಹಲವಾರು ಕಾರಣಗಳನ್ನು ಆತ ನೀಡುತ್ತಿದ್ದಾನೆ.

ಆತ ಟೆಂಡರ್ ಮೂಲಕ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಕೆಲಸ ಮಾಡಿಸುವ ಗುತ್ತೇದಾರಿಕೆ ಮಾಡುವಾತ ಎನಿಸುತ್ತದೆ ಆತನ ಹೇಳಿಕೆ ಪ್ರಕಾರ. ಆದರೆ ಇಲ್ಲಿ ಆತ ಬಹಳಷ್ಟು ನೊಂದಿರುವ ಬಗ್ಗೆ ಅರಿವಿಗೆ ಬರುತ್ತದೆ. ಆತ ಭ್ರಷ್ಟಾಚಾರ ಅನ್ಯಾಯ ಮೋಸದಿಂದ ಸಾಕಷ್ಟು ನೊಂದಿರುವುದು ಆತ ನೀಡಿದ ಹೇಳಿಕೆಯಿಂದಲೇ ಗ್ರಹಿಸಬಹುದು.

ಸದ್ಯ ಆತ ತಾನು ಪಡೆಯುತ್ತಿರುವ ಟೆಂಡರ್ ನಲ್ಲಿ ಅಧಿಕಾರಿಗಳು ಲಂಚ ಪಡೆದು ಸುಲಭವಾಗಿ ಹಣ ನೀಡಿದ ವ್ಯಕ್ತಿಗೆ ಟೆಂಡರ್ ದೊರೆಯುವಂತೆ ಮಾಡುತ್ತಿದ್ದರು, ಆ ಸಂದರ್ಭ ನಾನು ಕೂಡ ಹಣ ನೀಡಿದೆ. ಆದರೆ ನನ್ನಿಂದ ಹಣ ಪಡೆದುಕೊಂಡು ಕೆಲಸ ಮಾತ್ರ ನೀಡಲಿಲ್ಲ. ಹೀಗೆ ಸಾಕಷ್ಟು ಲಂಚವತಾರಗಳು ಕಂಡು ತೇಜ್ ರಾಜ ರೋಸಿ ಹೋಗಿದ್ದಾನಂತೆ, ಹೀಗಾಗಿ ಭ್ರಷ್ಟಚಾರದ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಿ ಲಂಚಗುಳಿ ಅಧಿಕಾರಗಳ ವಿರುದ್ಧ ಸಮರ್ಪಕ ದಾಖಲೆ ಸಂಗ್ರಹಿಸಿ ಎಸಿಬಿ ಮತ್ತು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ವಂತೆ.

ಆ ಮೇಲೆ ಸಾಕಷ್ಟು ದೇವರು ದೇವಸ್ಥಾನ ಗಳಿಗೆ ಯಾತ್ರೆ ಹೊರಟು ಈ ಕುರಿತು ನ್ಯಾಯ ಒದಗಿಸುವಂತೆ ಪ್ರಾರ್ಥನೆ ಮಾಡಿದ್ದಾನಂತೆ. ಆದರೂ ಆ ದೇವರೂ ಕೂಡ ನ್ಯಾಯ ಒದಗಿಸಲ್ವಂತೆ ಹೀಗಾಗಿ ಬೇಸತ್ತು ಭೂಮಿ ಮೇಲೆ ನ್ಯಾಯಕ್ಕೆ ಬೆಲೆ ಇಲ್ವಲ್ಲಾ ಎಂದುಕೊಂಡು ನಾನು ದೂರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಅಂದು ಅಂತಿಮ ತೀರ್ಪು ನೀಡುತ್ತಾರೆ ಅಂದು ಕೊಂಡು ಆಗಲು ನ್ಯಾಯ ಸತ್ಯಾಸತ್ಯತೆ ಕುರಿತು ಲೋಕಾಯುಕ್ತರ ಗಮನ ಸೆಳೆದರೂ ಯಾವುದೇ ಸಕರಾತ್ಮಕ ಸ್ಪಂಧನೆ ದೊರೆಯದ ಕಾರಣ ನಾನು ಚಾಕುವಿನಿಂದ ಇರಿಯಲು ಮುಂದಾದೆ ಎನ್ನುತ್ತಾನೆ ಆ ಆರೋಪಿ ತೇಜರಾಜ್ .

ಅಲ್ಲದೆ ತಾನು ನಂಬಿರುವ ದೇವರೇ ಈ ಕೃತ್ತ ಎಸಗಲು ತಿಳಿಸಿದ್ದಾನೆ ಎಂದು ಹೇಳಿಕೆ ನೀಡಿದ್ದಾನಂತೆ. ಇಂತಹ ಹೇಳಿಕೆ ನಡಿರುವ ಆರೋಪಿ ತೇಜರಾಜ್ ಮನನೊಂದಿರುವುದು ಸತ್ಯವಿರಬಹುದು. ಆದರೆ ಕೊಲೆ ಮಾಡುವ ಹಂತ ಕ್ಕೆ ಆತ ತಲುಪಿದ್ದು ತಪ್ಪು. ಕಾನೂನು ಕೈಗೆತ್ತಿಕೊಂಡಿರುವುದು ಅಪರಾಧ.

ಅಲ್ಲದೆ ಮಾನಸಿಕ ವಾಗಿ ಕುಗ್ಗಿರುವ ಆತನನ್ನು ಮೊದಲು ಸೂಕ್ತ ಚಿಕಿತ್ಸೆ ಕೊಡಿಸುವ ಅಗತ್ಯವಿದೆ. ತೇಜರಾಜ್ ಮನಸ್ಥಿತಿ ಅಧಪತನಕ್ಕಿಳಿದಿದೆ ಎಂದು ಆತನ ಚಹರೆ ನೋಡಿದರೆ ಗೊತ್ತಾಗುತ್ತದೆ. ಯಾವುದಕ್ಕೂ ಈ ಆರೋಪಿಯ ಬುಡ ಮೇಲು ಮಾಹಿತಿ ಸಂಗ್ರಹಿಸಿ ಅಗತ್ಯ ಕ್ರಮಕೈಗೊಳ್ಳುವ ಅವಶ್ಯಕವಿದೆ.

Related Articles

Leave a Reply

Your email address will not be published. Required fields are marked *

Back to top button