ಪ್ರಮುಖ ಸುದ್ದಿ

ವಾಯಾ ಕೆಂಭಾವಿಃ ಹೊತ್ತಿ ಉರಿದ ಖಾಸಗಿ ಬಸ್

ಹೊತ್ತಿ ಉರಿದ ಖಾಸಗಿ ಬಸ್ ಹಲವರಿಗೆ ಗಾಯ

ತುಮಕೂರಃ ನಗರ ಸಮೀಪದ ಊರುಕೆರೆ ಗ್ರಾಮ ಬಳಿ ರಾಷ್ಟ್ರೀಯ ಹೆದ್ದಾರಿ 5 ರ ಮೇಲೆ ವಿಜಯಪುರದಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ಸೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಉರಿದ ಪರಿಣಾಮ ಹಲವಾರು ಪ್ರಯಾಣಿಕರಿಗೆ ಗಾಯಗೊಂಡ ಘಟನೆ ನಡೆದಿದೆ.

ಗಾಯಾಳುಗಳನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆ ಹಾಗೂ ಸಿದ್ಧಗಂಗಾ ಆಸ್ಪತ್ರೆ ಮತ್ತು ಶ್ರೀದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ರಾಯಲ್ ಟ್ರಾನ್ಸ್‌ಪೋರ್ಟ್‌ ಬಸ್ ಇದಾಗಿದ್ದು, ವಿಜಯಪುರದಿಂದ ಶಹಾಪುರ ತಾಲೂಕಿನ‌ ಕೆಂಬಾವಿಗೆ‌ ಮಾರ್ಗವಾಗಿ ಬೆಂಗಳೂರ ತೆರಳುತ್ತಿರುವ ಬಸ್ ಇದಾಗಿದೆ ಎನ್ನಲಾಗಿದೆ‌.

ಬೆಳಗಿನ‌ ಜಾವ 3:30 ಕ್ಕೆ ಈ ಅವಘಡ ನಡೆದಿದೆ ಎನ್ನಲಾಗಿದೆ. ಬಸ್ ನಲ್ಲಿ 30 ಜನರು ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೂರು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.
ಕೆಂಬಾವಿ ಗ್ರಾಮದ ಹಲವರು ಇದೇ ಬಸ್ ನಲ್ಲಿ‌ ಬೆಂಗಳೂರಿಗೆ ತೆರಳುತ್ತಿದ್ದರು ಎನ್ನಲಾಗಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಐದು ಜನರು ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button