ಬಸವಭಕ್ತಿವಿನಯ ವಿಶೇಷ

ಶಹಾಪುರದಲ್ಲಿ ಆನೆಯೊಳಗೆ ಹನುಮ ನೋಡಿದಿರಾ..!

ಆನೆಯೊಳಗೆ ಹನುಮ ನೋಡಿದಿರಾ..! ಶನಿವಾರ ಶ್ರಾವಣ ಸಂಪನ್ನ

ಸಗರಾದ್ರಿ ಬೆಟ್ಟದಲ್ಲಿ ಬಯಲು ಹನುಮನ ಮಹಿಮೆ

ಇಂದು ಬೆಟ್ಟದ ಬಯಲು ಹನುಮಂತ ದೇವರ ಶ್ರಾವಣ ಸಂಪನ್ನ ಅನ್ನ ಸಂತರ್ಪಣೆ ಕಾರ್ಯಕ್ರಮ ನಿಮಿತ್ತ ಈ ಲೇಖನ
ಶ್ರಾವಣ ಕಡೆ ಶನಿವಾರ, ವಿಶೇಷ ಪೂಜೆ, ಅಭಿಷೇಕ, ಅಲಂಕಾರ, ಭಜನೆ, ಅನ್ನ ಸಂತರ್ಪಣೆ

ಮಲ್ಲಿಕಾರ್ಜುನ ಮುದ್ನೂರ
ಯಾಗಿರಿ,ಶಹಾಪುರಃ ಸಗರಾದ್ರಿ ಬೆಟ್ಟದಲ್ಲಿ ಕೋಟೆ ಕೊತ್ತಲಗಳು, ಗುಹೆಗಳು ಆದಿಮಾನವನ ನೆಲೆಗಳು ಪಾಂಡವರ ಬಂಡೆಗಳು ಅಲ್ಲದೆ ಹಲವಾರು ದೇವಾಲಯಗಳು ಜೀವ ಜಲಉಳ್ಳ ಬಾವಿ, ಕೆರೆಗಳು ಅಳಿದುಳಿದ ಸ್ಮಾರಕ, ವೀರಗಲ್ಲುಗಳು ಹಲವು ವರ್ಷಗಳಿಂದ ಕಾಪಿಟ್ಟುಕೊಂಡು ಬಂದಿದೆ.

ನಗರದ ದಕ್ಷಿಣ ಭಾಗದ ಬೆಟ್ಟದಲ್ಲಿರುವ ಅನೇಕ ದೇವಾಲಯಗಳ ಪೈಕಿ ನಾಗರಕೆರೆ ದಡದಿ ಇರುವ ಬೆಟ್ಟದ ಮೇಲೆ ಬಯಲು ಹನುಮನ ದೇವಾಲಯ ಒಂದು ವಿಶೇಷತೆ ಹೊಂದಿದೆ.

ಈ ದೇವಾಲಯ ಬೃಹತ್ ಬಂಡೆಯ ಮೇಲೆ ದಕ್ಷಿಣ ದಿಕ್ಕಿಗೆ ಮುಖ ಮಾಡಿರುವ ಹೆಂಬಡೆಯ ಮೇಲೆ ಹನುಮನ ಹುಬ್ಬು ಶಿಲ್ಪವಿದೆ. ಅದು 3.5 ಉದ್ದ 2 ಅಡಿ ಅಗಲವಿದ್ದು, ಈ ಹನುಮನ ಬಾಲ ವಿಶೇಷವಾಗಿದೆ. ಹಿಂಬದಿಯಿಂದ ಹನುಮನ ಎಡ ಭಾಗದ ಸೊಂಟದವರೆಗೆ ಬಾಲ ಬಂದಿದೆ.

ಹನುಮನ ಕಾಲ ಕೆಳಗಡೆ ಶನಿಯ ಮೂರ್ತಿಯೂ ಪೂರ್ವಕ್ಕೆ ತಲೆ ಪಶ್ಚಿಮಕ್ಕೆ ಕಾಲು ಇದೆ. ಈ ಮೂರ್ತಿ ಇರುವ ಬಂಡೆ ವಿಶೇಷವಾಗಿ ಆಗ್ನೆಯ ದಿಕ್ಕಿನಿಂದ ನೋಡಿ ಆನೆಯೊಂದು ಆಗ್ನೇಯ ದಿಕ್ಕಿಗೆ ಬೆನ್ನು ಮಾಡಿ ಮಲಗಿದಂತೆ ಕಾಣುತ್ತದೆ.
ವಾಯುವ್ಯ ದಿಕ್ಕಿನಿಂದ ನೋಡಿದರೆ ವಾಯುವ್ಯಕ್ಕೆ ಮುಖ ಮಾಡಿ ಮಲಗಿರುವ ಆನೆಯಂತೆ ಸ್ಪಷ್ಟ ದೃಶ್ಯ ಕಾಣುತ್ತದೆ. ನೈರುತ್ಯ ದಿಕ್ಕಿನಿಂದ ನೋಡಿದರೆ ಹನುಮಂತ ಸಂಜೀವನಿ ಬೆಟ್ಟ ಹೊತ್ತು ನಡೆಯುತ್ತಿರುವ ದೃಶ್ಯದಂತೆ ಹನುಮನ ಕೈಯಲ್ಲಿ ಬೆಟ್ಟ ಇರುವಂತೆ ಕಾಣುತ್ತದೆ.

ಆದರೆ ಹನುಮನ ಮೂರ್ತಿ ಬಲಗೈ ಮೇಲೆತ್ತಿದ್ದು, ಎಡಗೈಯಲ್ಲಿ ಕಿರು ಗದೆ ಹಿಡಿದಿದ್ದಾನೆ. ಬಯಲು ಹನುಮನ ಪ್ರದೇಶ ಹಲವಾರು ವಿಸ್ಮಯಗಳಿಂದ ಕೂಡಿದೆ. ಈ ಮೂರ್ತಿಯು ರಾಮದಾಸರ ಕಾಲದಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಈ ದೇವಾಲಯಕ್ಕೆ ಹೋಗುವ ಪಶ್ಚಿಮಕ್ಕೆ ಇಲ್ಲಿನ ಮೊದಲ ಅರಸ ಸಗರರಾಯ ಚಕ್ರವರ್ತಿ ಬೆಟ್ಟದಲ್ಲಿ ಕೋಟೆ ನಿರ್ಮಾಣ ಮಾಡುವ ಮೊದಲು ಇದೇ ಸ್ಥಳದಲ್ಲಿ ಯಜ್ಞಕುಂಡ ಸ್ಥಾಪಿಸಿ ಹೋಮ ಹವನ ನಡೆಸಿದ್ದಾನೆ. ಇದೇ ಸ್ಥಳದಲ್ಲಿ ಮಹಾ ಕಾಳಿ ಮತ್ತು ವೀರಭದ್ರೇಶ್ವರ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಬೆಟ್ಟದ ಮೇಲೆ ಕೋಟೆ ನಿರ್ಮಾಣಕ್ಕೆ ಮುಂದಾಗಿದ್ದಾನೆ ಎಂಬುದು ಸಂಶೋಧನೆ ಮೂಲಕ ತಿಳಿದು ಬಂದಿದೆ.

ಸಗರರಾಯ ಚಕ್ರವರ್ತಿ ಕಾಲದಲ್ಲಿ ಹನುಮ ಸ್ಥಾಪನೆ

ಇಲ್ಲಿನ ನಾಗರ ಕೆರೆ ದಡದಲ್ಲಿ ಪಂಚಶಿವಾಲಯ ಮತ್ತು ಸೂರ್ಯ ದೇವಾಲಯವನ್ನು ಕೋಟೆ ನಿರ್ಮಾಣ ಮಾಡುವ ಮೊದಲು ನಿರ್ಮಿಸಿ ಪೂಜೆ ಪುನಸ್ಕಾರವನ್ನು ಸಗರ ಚಕ್ರವರ್ತಿ ಸಲ್ಲಿಸಿದ್ದಾನೆ. ಅದರ ಪ್ರತೀಕ ಇಂದಿಗೂ ಶಿವ ಪಂಚಾಯತ ದೇವಸ್ಥಾನ, ಯಜ್ಞಕುಂಡ ಕುರುಗಳು ಇಲ್ಲಿವೆ. ಅದೇ ವೇಳೆಗೆ ಬಯಲು ಹನುಮನನ್ನು ಸ್ಥಾಪಿಸಿ ಯಜ್ಞೆಯ ಮಹಾಶಕ್ತಿಯನ್ನು ಪಡೆಯಲು ಪ್ರಾರ್ಥನೆ ಸಲ್ಲಿದ್ದಾನೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.

ಧರ್ಮಣ್ಣ ಬಡಿಗೇರ. ಸಂಶೋಧಕ, ಉಪನ್ಯಾಸಕರು. ಶಹಾಪುರ.

ಹನುಮನ ಮಹಿಮೆ ಅಪಾರ..

ಇಲ್ಲಿನ ಬಯಲಲಿ ಇರುವ ಹನುಮನಿಗೆ ನೆರಳು ಮಾಡಲು ತಯ್ಯಾರಿ ನಡೆಸಿದಾಗ ಸ್ವತಃ ಹನುಮನೇ ನಾನು ಬಯಲಲಿ ಇರುವೆ. ನನಗೆ ನೆರಳು ಯಾರಿಂದಲೂ ಹಾಕಲು ಸಾಧ್ಯವಿಲ್ಲ. ನನಗೆ ಪೂಜಿಸದವರಿಗೆ ನಾನು ನೆರಳಾಗಿರುವ ಎಂಬ ಸಂದೇಶವನ್ನು ಇಲ್ಲಿನ ಭಕ್ತಾಧಿ ಒಬ್ಬರಿಗೆ ಹನುಮನ ರೂಪದಲ್ಲಿಯೇ ಬಂದು ತಿಳಿಸಿದ್ದಾನೆ.

ರಾಮು ತಹಶೀಲ್. ಹನುಮ ಭಕ್ತ.

Related Articles

Leave a Reply

Your email address will not be published. Required fields are marked *

Back to top button