ಪ್ರಮುಖ ಸುದ್ದಿ

ಆಗಷ್ಟ್ 15ಕ್ಕೆ ನೂತನ ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ ಪಕ್ಕಾ?

ಬೆಂಗಳೂರು:  ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯ ಕೈಗೊಳ್ಳುವದಕ್ಕೆ ಮೊದಲ ಆದ್ಯತೆ ನೀಡಬೇಕಿದೆ. ಹೀಗಾಗಿ, ವರಿಷ್ಠರ ಸೂಚನೆ ಮೇರೆಗೆ ರಾಜ್ಯಕ್ಕೆ ಮರಳಿದ್ದು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ. ಎರಡು ಮೂರು ದಿನಗಳ ಕಾಲ ಬೆಳಗಾವಿ ಭಾಗದಲ್ಲೇ ವಾಸ್ತವ್ಯ ಹೂಡುತ್ತೇನೆ. ಕೇಂದ್ರ ಸಚಿವ ಸುರೇಶ್ ಅಂಗಡಿ ಅವರೂ ನಮ್ಮ  ಜತೆಗಿರುತ್ತಾರೆ.

ಆಗಸ್ಟ್ 10ಕ್ಕೆ ದೆಹಲಿಗೆ ತೆರಳಿ ವರಿಷ್ಟರೊಂದಿಗೆ ಚರ್ಚಿಸಿ, ಸಂಪುಟ ರಚನೆ ಮಾಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಹೀಗಾಗಿ, ಆಗಷ್ಟ್ 15ರ ಧ್ವಜಾರೋಹಣದ ವೇಳೆಗೆ ನೂತನ ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಯಲ್ಲಿ ತಿರಂಗಾ ಹಾರಿಸುವುದು ಪಕ್ಕಾ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button