ಪ್ರಮುಖ ಸುದ್ದಿ

ಜೂಜು ಅಡ್ಡೆ ಮೇಲೆ‌ ಪೊಲೀಸರ ದಾಳಿ

75 ಸಾವಿರ ರೂಪಾಯಿ ನಗದು ಜಪ್ತಿ

ಯಾದಗಿರಿ: ಜೂಜು ಅಡ್ಡೆ ಮೇಲೆ ದಿಡೀರನೆ ದಾಳಿ‌ ನಡೆಸಿದ ಪೊಲೀಸರು 75 ಸಾವಿರ ನಗದು ವಶಪಡಿಸಿಕೊಂಡ ಘಟನೆ ಸುರಪುರ ತಾಲೂಕಿನ ರುಕ್ಮಾಪೂರ ಗ್ರಾಮದಲ್ಲಿ ನಡೆದಿದೆ.

ಸುರಪುರ ಡಿಎಸ್ಪಿ ಶೀಲವಂತಕುಮಾರ್​ ನೇತೃತ್ವದಲ್ಲಿ ದಾಳಿ ನಡೆದಿದ್ದು, ಪೊಲೀಸರು ಆಗಮಿಸುತಗತಿದ್ದಂತೆ ಇಸ್ಪೇಟ್ ಆಡುತಗತಿದ್ದ 20 ಕ್ಕೂ ಹೆಚ್ವು ಜೂಜುಕೋರರು ಸ್ಥಳದಿಂದ ಕಾಲಿಗೆ ಬುದ್ಧಿ‌ ಹೇಳಿದ್ದಾರೆ.

ಅಡ್ಡೆಯಲ್ಲಿ ಬಿಟ್ಟಿದ್ದ 75 ಸಾವಿರ ರೂ. ಹಣ ಸೇರಿದಂತೆ ಇತರ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಸುರಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button