ಪ್ರಮುಖ ಸುದ್ದಿ

ವಿದ್ಯುತ್ ವಿತರಣ ಕೇಂದ್ರಃ ಅಗ್ನಿ ಅವಘಡ, ಸಿಬ್ಬಂದಿ ಪಾರು

ವಿದ್ಯುತ್ ವಿತರಣ ಕೇಂದ್ರದಲ್ಲಿ ಅಗ್ನಿ ಅವಘಡ, ಅಪಾಯದಿಂದ ಪಾರಾದ ಜೆಸ್ಕಾಂ ಸಿಬ್ಬಂದಿ

ಯಾದಗಿರಿ: ವಿದ್ಯುತ್ ವಿತರಣಾ ಕೇಂದ್ರದಲ್ಲಿ ವಿದ್ಯುತ್ ಶಾಟ್೯ ಸರ್ಕ್ಯೂಟ್ ನಿಂದ ಭಾರಿ‌ ಪ್ರಮಾಣದ ಬೆಂಕಿ ಹೊತ್ತಿಕೊಂಡಿದ್ದು, ಅಪಾರ ಪ್ರಮಾಣದ ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗಿದ್ದು, ಸ್ಥಳದಲ್ಲಿದ್ದರೆ 4 ಜನ ಜೆಸ್ಕಾಂ ಸಿಬ್ಬಂದಿಗಳು ಹೊರ ಬರುವ ಮೂಲಕ ಅಪಾಯದಿಂದ ಪಾರಾದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಪಟ್ಟಣದಲ್ಲಿ ನಡೆದಿದೆ.

ಕಕ್ಕೇರ ಪಟ್ಟಣದ 33 ಕೆವಿ ವಿತರಣಾ ಕೇಂದ್ರದಲ್ಲಿ ಈ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೇಂದ್ರದಲ್ಲಿದ್ದ ವಿದ್ಯುತ್ ಸರಬರಾಜಿಗೆ ಬೇಕಾದ ವಿವಿಧ ಸಾಮಾಗ್ರಿಗಳು ಬೆಂಕಿಗೆ ಆಹುತಿಯಾಗಿವೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತಿದ್ದಾರೆ ಮತ್ತು ಕೇಂದ್ರದ ಜೆಸ್ಕಾಂ ಸಿಬ್ಬಂದಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರೀಕ್ಷಿಸುತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Related Articles

Leave a Reply

Your email address will not be published. Required fields are marked *

Back to top button