ಪ್ರಮುಖ ಸುದ್ದಿ

ಮಾಜಿ ಸಚಿವ, ಚಿತ್ರನಟ ರೆಬಲ್ ​ಸ್ಟಾರ್​ ಅಂಬರೀಶ್​ ನಿಧನ

ಚಿತ್ರನಟ ರೆಬಲ್ ​ಸ್ಟಾರ್​ ಅಂಬರೀಶ್​ ವಿಧಿವಶ

ಬೆಂಗಳೂರು: ಮಾಜಿ ಸಚಿವ, ಚಿತ್ರನಟ ಅಂಬರೀಶ್​ ಆರೋಗ್ಯದಲ್ಲಿ ಏರುಪೇರು ಕಂಡುಬಂದ‌ ಹಿನ್ನೆಲೆ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನ ಹೊಂದಿದ್ದಾರೆ.

ಅಂಬರೀಶ್ ಅವರು ಏಕಾಏಕಿ ಮನೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ಕಿಡ್ನಿ ಮತ್ತು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಹೀಗಾಗಿ ಅಂಬರೀಶ್​‌ ಅವರಿಗೆ ತೀವ್ರ ಉಸಿರಾಟದ ತೊಂದರೆ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ
ಐಸಿಯುಗೆ ಶಿಪ್ಟ್ ಮಾಡಲಾಗಿತ್ತು.

ವಿಕ್ರಂ ಆಸ್ಪತ್ರೆ ವೈದ್ಯರಾಗಿರುವ ಡಾ. ಸತೀಶ್ ನೇತೃತ್ವದ ತಂಡ ಚಿಕಿತ್ಸೆ ನೀಡುತ್ತಿತ್ತು.ಆದರೆ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ಅವರ ಪತ್ನಿ ಸುಮಲತಾ ಹಾಗೂ ಮಗ ಅಭಿಷೇಕ್​ ಇದ್ದರು.

ಈಗಾಗಲೇ ಆಸ್ಪತ್ರೆಗೆ ಮುಖ್ಯಮಂತ್ರಿ ಹೆಚ್.​ಡಿ.ಕುಮಾರಸ್ವಾಮಿ, ಸಚಿವ ಕೆಜೆ ಜಾರ್ಜ್​ ಭೇಟಿ ನೀಡಿದ್ದಾರೆ. ಅಂಬರೀಶ ಅವರ‌ ನಿಧನ‌ದಿಂದ ಕನ್ನಡ ಚಿತ್ರರಂಗ ಅನಾಥ ಪ್ರಜ್ಞೆ ಕಾಡಲಿದೆ.
ಅವರು ಇತ್ತೀಚೆಗೆ ರಾಜಕೀಯದಿಂದ ಬೆಸತ್ತು‌ ರಾಜಕಾರಣದಿಂದ ಸಾಧ್ಯವಾದಷ್ಟು ದೂರ ಉಳಿಯಲು ಪ್ರಯತ್ನಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button