ಪ್ರಮುಖ ಸುದ್ದಿ

ಕಲಬುರಗಿ: ತಲವಾರ್ ಪ್ರದರ್ಶಿಸಿದ 8ಜನರ ಬಂಧನ

ಕಲಬುರಗಿ: ಪದ್ಮಾವತಿ ಚಲನಚಿತ್ರ ಬಿಡುಗಡೆ ವಿರೋಧಿಸಿ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಅನೇಕ ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಅಂತೆಯೇ ಕಲಬುರಗಿ ನಗರದಲ್ಲಿ ವಿಭಿನ್ನ ಪ್ರತಿಭಟನೆ ಮಾಡಲು ಹೋಗಿ ತಲವಾರ್ ಪ್ರದರ್ಶಿಸಿದ್ದ ರಜಪೂತ್ ಸಮಾಜದ ಕೆಲ ಯುವಕರು ಈಗ ಪೊಲೀಸರ ಅತಿಥಿ ಆಗಿದ್ದಾರೆ.

ಹೌದು, ನಿನ್ನೆ ಕಲಬುರಗಿ ನಗರದ ಶಹಬಜಾರ್ ನಿಂದ ಡಿಸಿ ಕಚೇರಿವರೆಗೆ ರಜಪೂತ ಸಮಾಜ ಪ್ರತಿಭಟನಾ ಮೆರವಣಿಗೆ ನಡೆಸಿತ್ತು. ಸಮುದಾಯವನ್ನು ಅವಹೇಳನ ಮಾಡಿರುವ ಪದ್ಮಾವತಿ ಚಿತ್ರ ಬಿಡುಗಡೆಗೊಳಿಸದಂತೆ ಆಗ್ರಹಿಸಲಾಗಿತ್ತು. ಆದರೆ, ಈ ವೇಳೆ ಕೆಲ ಯುವಕರು ಬಹಿರಂಗವಾಗಿ ತಲವಾರ್ ಗಳನ್ನು ಪ್ರದರ್ಶಿಸಿದ್ದರು.

ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಮಾರಕಾಸ್ತ್ರ ಪ್ರದರ್ಶಿಸಿದ ಹಿನ್ನೆಲೆಯಲ್ಲಿ 8ಜನರನ್ನು ಬಂಧಿಸಲಾಗಿದೆ. ಅಲ್ಲದೆ ತಲವಾರ್ ಪ್ರದರ್ಶನ ಕಂಡರೂ ಸಹ ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪವೆಸಗಿದ ಇಬ್ಬರು ಎಎಸ್ಐ ಗಳನ್ನು ಅಮಾನತ್ತುಗೊಳಿಸಿ ಎಸ್ಪಿ ಶಶಿಕುಮಾರ್ ಆದೇಶಿಸಿದ್ದಾರೆ.

Related Articles

One Comment

  1. Very good news coverage and great explanation of each events.I wish great reach all over the country’s in future also.Congrats..

    Shravanayogi Hiremath

Leave a Reply

Your email address will not be published. Required fields are marked *

Back to top button