ನಾಲ್ಕು ಅಡಿ ನೆಲ ಮಾಳಿಗೆಯಲ್ಲಿ ಕೈಗೊಂಡ ಅನುಷ್ಠಾನ ಅಂತ್ಯಃ ಭಕ್ತರ ಹರ್ಷೋದ್ಘಾರ
ನಾಲ್ಕು ಅಡಿ ಆಳದಲ್ಲಿ ಕುಳಿತಿದ್ದ ಅನುಷ್ಠಾನ ಅಂತ್ಯ
ಕಲಬುರ್ಗಿಃ ತಾಲೂಕಿನ ಕೋಟನೂರ ಬಳಿಯ ನಂದಿಕೂರ ಸೀಮಾಂತರದ ಕರಿಬಸಮ್ಮ ದೇವಿ ದೇವಾಲಯದ ಮುಂದೆ ವಿಜಯಕುಮಾರ ಪವಾರ್ ಎಂಬಾತ ಕಳೆದ ಎರಡು ದಿನಗಳಿಂದ ಕುಳಿತ ಅನುಷ್ಠಾನಕ್ಕೆ ಇಂದು ಅಂತ್ಯವಾಡಲಾಗಿದೆ.
ನೂರಾರು ಭಕ್ತರ ಸಮ್ಮುಖದಲ್ಲಿ ನೆಲಮಾಳಿಗೆಯಲ್ಲಿ ಕುಳಿತಿದ್ದ ವಿಜಯಕುಮಾರ ಅನುಷ್ಠಾನದಿಂದ ಮೇಲೆದಿದ್ದಾರೆ. ದೇವಿಗೆ ವಿಶೇಷ ಪೂಜೆ, ಅನುಷ್ಠಾನಕ್ಕೆ ಕುಳಿತಿದ್ದ ಜಾಗದಲ್ಲೂ ವಿಶೇಷ ಕುಂಕುಮ, ಹರಿಶಿಣ ಮಡಿ ನೀರು ಸಿಮಿಸಿ ಅನುಷ್ಠಾನಗೈದ ವಿಜಯಕುಮಾರನನ್ನು ಭಕ್ತಾಧಿಗಳು ದೇವಿಯ ಹೆಸರಲ್ಲಿ ಜೈಕಾರ ಹಾಕುತ್ತ ಮೇಲೆಬ್ಬಿಸಿದರು
ದೇವಿಯ ಹೆಸರಲ್ಲಿ ಜೈಕಾರ ಹಾಕುತ್ತಿದ್ದಂತೆ ನೆಲಮಾಳಿಗೆಯಲ್ಲಿ ಕುಳಿತಿದ್ದ ಭಕ್ತ ವಿಜಯಕುಮಾರ ಕೇಕೆ ಹಾಕುತ ಮೇಲೆದಿದ್ದಾನೆ. ಇದಕ್ಕೆ ಮೂಢ ನಂಬಿಕೆ ಅನ್ನಬೇಕೋ ಅಥವಾ ಭಕ್ತಿ ತೀವ್ರತೆ ಪಡೆದುಕೊಂಡ ಕಾರಣ ಇಂತಹ ಘಟನೆಗಳು ನಡೆಯುತ್ತವೆ ಅನ್ನಬೇಕೋ ಗೊತ್ತಿಲ್ಲ.
ಒಟ್ಟಾರೆ ಗ್ರಾಮದ ಭಕ್ತರು ಎಲ್ಲರೂ ಸೇರಿ ಅನುಷ್ಠಾನಗೈದ ವಿಜಯಕುಮಾರನ ವ್ರತ ಮುಗಿಸುವಲ್ಲಿ ಸಂಭ್ರಮದಿಂದ ಭಾಗಿಯಾಗಿರುವುದು ಕಂಡು ಬಂದಿತು.
ಹಿನ್ನೆಲೆಃ ವಿಜಯಕುಮಾರ ಪವಾರ್ ಎಂಬಾತನಿಗೆ ಕರಿಬಸಮ್ಮ ದೇವಿ ಕನಸಿನಲ್ಲಿ ಬಂದು ಭೂಮಿಯಲ್ಲಿ ಅನುಷ್ಠಾನಕ್ಕೆ ಕುಳಿತಿಕೋ ಇಲ್ಲವಾದಲ್ಲಿ ನೀನು ಮರಣ ಹೊಂದುತ್ತಿಯಾ. ನನ್ನ ಆಜ್ಞೆ ಪಾಲಿಸು ಒಳ್ಳೆಯದಾಗುತ್ತದೆ. ಇಲ್ಲವಾದಲ್ಲಿ ಲಿಂಗೈಕೆ ಗ್ಯಾರಂಟಿ ಎಂದು ಹೇಳಿದ್ದಳಂತೆ. ಆ ಕಾರಣಕ್ಕೆ ವಿಜಯಕುಮಾರ ಮೂರು ದಿನದಿಂದ ಭೂಮಿಯೊಳಗಡೆ ಕುಳಿತು ಅನುಷ್ಠಾನ ಮಾಡಿದ್ದಾನೆ. ಈಗ ಭಕ್ತರೆಲ್ಲರೂ ಸೇರಿ ಅದ್ದೂರಿಯಾಗಿ ಆತನ ಅನುಷ್ಠಾನ ಮಂಗಲೋತ್ಸವದಲ್ಲಿ ಭಾಗವಹಿಸಿದ್ದಾರೆ. ಗ್ರಾಮದಲ್ಲಿ ಮೆರವಣಿಗೆಯೂ ನಡೆದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.