ಪ್ರಮುಖ ಸುದ್ದಿ

ಸರಣಿ ಕಳ್ಳತನ : ಕಳ್ಳರ ಬಂಧನಕ್ಕೆ ಬಲೆ ಬೀಸಿದ ಪೊಲೀಸರು

ಮೈಸೂರು : ಆಲನಹಳ್ಳಿ ಬಡಾವಣೆಯಲ್ಲಿ ತಡರಾತ್ರಿ ವೇಳೆ ವಿವಿಧ ಅಂಗಡಿಗಳಿಗೆ ಕನ್ನ ಹಾಕಿ ಕಳ್ಳರು ಪರಾರಿ ಆಗಿರುವ ಘಟನೆ ನಡೆದಿದೆ. ಟಿ.ನರಸೀಪುರಕ್ಕೆ ತೆರಳುವ ರಿಂಗ್ ರಸ್ತೆಯಲ್ಲಿರುವ ಬಸವೇಶ್ವರ ಪೈಪ್ಸ್, ರಝಾ ಟ್ರಾನ್ಸ್ ಪೋರ್ಟ್ , ಗಣೇಶ್ ಎಲೆಕ್ಟ್ರಿಕಲ್ ಅಂಗಡಿಗಳ ಶೆಟರ್ ಮುರಿದು ಸರಣಿ ಕಳ್ಳತನ ನಡೆದಿದೆ. ಆಲನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button