ಪ್ರಮುಖ ಸುದ್ದಿ
ಅಧಿಕಾರಕ್ಕೆ ಬಂದ ಮೇಲೆ ನಾವ್ ಬೇಡ್ವಾಃ ಎಚ್.ಎಂ.ರೇವಣ್ಣ
MLC ಗಳಿಗಿಲ್ಲ ಸಚಿವ ಸ್ಥಾನ- ಎಚ್.ಎಂ.ರೇವಣ್ಣ ಅಸಮಾಧಾನ
ದೆಹಲಿಗೆ ಮೈತ್ರಿ ಸರ್ಕಾರ ರಚನೆ ಕಸರತ್ತು ನಡೆಸಲು ಕೆಲಸ ಮಾಡಲು ನಾವ್ ಬೇಕು. ಆದರೆ ಯಶಸ್ಸು ದೊರಕಿದ ಮೇಲೆ ನಾವ್ ಬೇಡವಾದೆವಾ ಎಂದು ಕಾಂಗ್ರೆಸ್ ಹಿರಿಯ ಮುಖಂಡ MLC ಎಚ್.ಎಂ.ರೇವಣ್ಣ ಅಸಮಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಮೈತ್ರಿ ಸರ್ಕಾರ ರಚನೆಯಾದ ಮೇಲೆ ವಿಧಾನ ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡದಿರುವ ನಿರ್ಣಯ ಕೈಗೊಂಡ ಹಿನ್ನೆಲೆ ಅಸಮಾಧಾನ ಹೊರ ಹಾಕಿದ ಅವರು,
ಕಾಂಗ್ರೆಸ್ ಪಕ್ಷದ ಹಿರಿಯನಾಗಿದ್ದು ಅಲ್ಲದೆ ಚನ್ನಪಟ್ಟಣಲ್ಲಿ 5 ಸಾವಿರ ದಿಂದ 35 ಸಾವಿರ ಮತಗಳ ಹೆಚ್ಚಿಗೆ ಮಾಡಲು ಶ್ರಮಿಸಿದ್ದೇನೆ. ಪಕ್ಷಕ್ಕಾಗಿ ಹಲವು ಬಾರಿ ತ್ಯಾಗವು ಮಾಡಿದ್ದೇನೆ. ಹೆಬ್ಬಾಳ ಮತ ಕ್ಷೇತ್ರ.ಸ್ಪರ್ಧೆ ಬೇಡ ಎಂದಾಗಲೂ ಬಿಟ್ಟು, ಪಕ್ಷ ಸೂಚಿಸಿದವರ ಗೆಲುವಿಗೆ ಶ್ರಮಿಸಿದ್ದೇನೆ.
ಹೀಗಾಗಿ ನನಗೆ ನಂಬಿಕೆ ಇದೆ. ಕಾಂಗ್ರೆಸ್ ಹೈಕಮಾಂಡ್ ನನಗೆ ಸಚಿವ ಸ್ಥಾನ ನೀಡಲು ಕ್ರಮಕೈಗೊಳ್ಳಲಿದೆ ಎಂಬ ನಂಬಿಕೆ ನನಗಿದೆ ಎಂದರು.