ಪ್ರಮುಖ ಸುದ್ದಿ

ಯಾದಗಿರಿಃ ತಾ.ಪಂ. ಅಧ್ಯಕ್ಷನ ಸಹೋದರನಿಂದ ಅತ್ಯಾಚಾರ ಯತ್ನ.?

ಗುಂಪು ಘರ್ಷಣೆ 10 ಮಂದಿಗೆ ಗಾಯ

ಯಾದಗಿರಿಃ ಇಲ್ಲಿನ ತಾಲೂಕು ಪಂಚಾಯತ್ ಅಧ್ಯಕ್ಷ ಭಾಷು ರಾಠೋಡ ಅವರ ಸಹೋದರ ಅರ್ಜುನ ರಾಠೋಡ ವಿರುದ್ಧ ಅತ್ಯಾಚಾರಕ್ಕೆ ಯತ್ನ ಆರೋಪ ಕೇಳಿಬಂದಿದೆ. ಇದೇ ನ. 16 ರಂದು ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದನೆಂದು ಆರೋಪಿಸಲಾಗಿದೆ. ನೊಂದ ಮಹಿಳೆಯ ಕುಟುಂಬಸ್ಥರು ಈ ಬಗ್ಗೆ ಪ್ರಶ್ನಿಸಲು ಮನೆಗೆ ಹೋದಾಗ ಭಾಷು ರಾಠೋಡ ಮತ್ತು ಮಹಿಳೆಯ ಕುಟುಂಬಸ್ಥರ ಮಧ್ಯೆ ಇಂದು ಬೆಳಗ್ಗೆ ಮಾರಂಮಾರಿ ನಡೆದಿದೆ.

ತಾಲೂಕಿನ ಸಮಣಪುರ ತಾಂಡಾದಲ್ಲಿ ಈ ಘಟನೆ ನಡೆದದ್ದು, ಮಾರಂಮಾರಿಯಲ್ಲಿ ಎರಡು ಕಡೆಯ ಒಟ್ಟು 10 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅತ್ಯಾಚಾರಕ್ಕೆ ಯತ್ನಿಸಿಲ್ಲಃ ಅರ್ಜುನ

ಯಾವುದೆ ಅತ್ಯಾಚಾರದಂತ ಘಟನೆ ನಡೆದಿಲ್ಲ. ನಾನು ಅಂತಹ ಕೆಲಸ ಮಾಡಿಲ್ಲ. ಚುನಾವಣೆ ಸಮೀಪಿಸುತ್ತಿದ್ದು, ಸುಳ್ಳು ಆರೋಪ ಮಾಡಿ ಮನೆಗೆ ಬಂದು ಹೊಡೆದಿದ್ದಾರೆ. ಇದರ ಹಿಂದೆ ರಾಜಕೀಯ  ದುರುದ್ದೇಶವಿದೆ ಎಂದು ತಾಪಂ ಅಧ್ಯಕ್ಷ ಭಾಷು ರಾಠೋಡ ಅವರ ಸಹೋದರ ಅರ್ಜುನ ರಾಠೋಡ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button