ಪ್ರಮುಖ ಸುದ್ದಿ

ಶಹಾಪುರಃ ಮಾನವೀಯತೆ ಇರದ ನಗರದ ಟ್ರೆಂಡ್ಸ್ ಮಹಲ್

ಮಾನವೀಯತೆ ಇರದ ನಗರದ ಟ್ರೆಂಡ್ಸ್ ಸಿಬ್ಬಂದಿ-ಆಕ್ರೋಶ

ಶಹಾಪುರಃ ನಗರದ‌ ಸಿಬಿ ಕಮಾನ್ ಹತ್ತಿರ‌ ಬೀದರ-ಬೆಂಗಳೂರ ಹೆದ್ದಾರಿ ಬದಿ ಟ್ರೆಂಡ್ಸ್ ಮಹಲ್ ಒಂದು ತಲೆ ಎತ್ತಿದೆ.
ಈ ಟ್ರೆಂಡ್ಸ್ ಮಹಲ್‌ನಲ್ಲಿ ಬಟ್ಡೆ ಬರೆ, ವಿವಿ್ ಶರ್ಟ್, ಪ್ಯಾಂಟ್ ಸೇರಿದಂತೆ ಸೀರೆ ಮತ್ತು ಮಕ್ಕಳಿಗೂ ಬಟ್ಟೆಗಳು ದೊರೆಯುತ್ತವೆ.

ಟ್ರೆಂಡ್ಸ್ ಮಹಲ್ ನೋಡಲೇನು‌ ಸುಂದರವಾಗಿಯೇ ಕಾಣುತ್ತದಲ್ಲದೆ ಅಲ್ಲಿ ಕೆಲಸ‌ ಮಾಡುವವರು ಟ್ರೆಂಡ್ಸ್  ಗೆ ತಕ್ಕಂತೆ ಶೂಸ್ ಇನ್ ಶರ್ಟ್, ಟೈ ಹಾಕಿಕೊಂಡಿದ್ದು, ಗ್ರಾಹಕರನ್ನು ಸೆಳೆಯುತ್ತಿದ್ದಾರೆ ಏನು ಗೊತ್ತಿಲ್ಲ. ಆದರೆ‌ ಅವರ ಮನಸ್ಸು ಮಾತ್ರ ಸರಿಯಿಲ್ಲ‌ ಎಂದರೆ ತಪ್ಪಾಗಲಾರದು.

ಈಗ‌ ಮುಖ್ಯವಾದ ವಿಷಯಕ್ಕೆ ಬರುತ್ತೇನೆ, ಮಾನವೀಯತೆ ಹೊಂದಿಲ್ಲದ ಟ್ರೆಂಡ್ಸ್ ತಗೊಂಡು‌ ಏನ್ ಮಾಡಬೇಕು ಹೇಳಿ. ಈ ಟ್ರೆಂಡ್ಸ್ ಪಕ್ಕದ ಮನೆಯಲ್ಲಿ ಹಿರಿಯರೊಬ್ಬರು ಮೃತಪಟ್ಟಿದ್ದರೂ,

ಇಲ್ಲಿ ಸಂಸ್ಕಾರಕ್ಕಾಗಿ ನೂರಾರು ಜನ ಆಗಮಿಸಿದ್ದರು. ಗುರುವಾರ ಸಂಜೆಯೇ ಮೃತಪಟ್ಟಿದ್ದರಿಂದ ಸಹಜವಾಗಿ ಜನ ರಾತ್ರಿಯಿಂದಲೇ ಬರಲು ಆರಂಭಿಸಿದ್ದಾರೆ. ಬಂದ ಜನ ಹಲವರು‌ ಈ‌ ಟ್ರೆಂಡ್ಸ್ ಅಂಗಡಿ ಮುಂದೆ ಇರುವ ಪಾರ್ಕಿಂಗ್ ನಲ್ಲಿ ಬೈಕ್ ನಿಲ್ಲಿಸುತ್ತಿದ್ದಂತೆ‌, ಅಂಗಡಿಯ ಸಿಬ್ಬಂದಿ‌ ಬೈಕ್ ತೆಗೆಯಿರಿ ಇದು ನಮ್ಮ ಗ್ರಾಹಕರಿಗೆ ಮಾತ್ರ ಉಪಯೋಗಕ್ಕಿದೆ ಎಂದು ಬೈಕ್ ನಿಲ್ಲಲು ಅವಕಾಶ ಕೊಡದೆ, ಅಲ್ಲದೆ ಜನರಿಗೂ ಅಲ್ಲಿ ನೆರಳಲಿ ನಿಲ್ಲಲು ಅವಕಾಶ ಕೊಡದಿರುವದು‌ ನಗರದ ಜನತೆಯ ಆಕ್ರೋಶಕ್ಕೆ ಕಾರಣವಾಯಿತು.

ಸಾಕಷ್ಡು ಬಾರಿ ನಾವೇ ಟ್ರೆಂಡ್ಸ್ ಗ್ರಾಹಕರಿದ್ದು, ಒಂದು ಸಂದರ್ಭ ಜನ ಬಂದಿದ್ದಾರೆ ನೆರಳು ಇರುವ‌ ಕಾರಣ‌ ನಿಲ್ತಾರೆ, ಒಂದಿಷ್ಟು ಜಾಗದ‌ ಕುಳಿತುಕೊಳ್ಳುತ್ತಾರೆ ಹೋಗಲಿ‌ ಬಿಡಿ ಎನ್ನುವ ಸೌಜನ್ಯವಿರದ ಈ ಟ್ರೆಂಡ್ಸ್ ನವರಿಗೆ ಏನೆನ್ನಬೇಕು.

ನಾಳೆ‌ ಇದೇ‌ ಟ್ರಂಡ್ಸ್ ಅಂಗಡಿಗೆ ನಾವೇ ತಾನೇ ಖರೀದಿಗೆ ಹೋಗುವವರು ಅನ್ನೋ ಪರಿಜ್ಞಾನವಿಲ್ಲದ ಟ್ರೆಂಡ್ಸ್ ಗೆ ಗ್ರಾಹಕರು ತಕ್ಕ‌ ಪಾಠ ಕಲಿಸಬೇಕಿದೆ ಎನ್ನುವ ಚರ್ಚೆ ಈ‌ ಸಂದರ್ಭದಲ್ಲಿ ಕೇಳಿ ಬಂದವು.

ನೆರೆ ಹೊರೆದಲ್ಲಿ ನಡೆದ ಘಟನೆ,‌ ಕಷ್ಟ ಸುಖದಲ್ಲಿ ಭಾಗವಹಿಸಬೇಕು‌ ಎನ್ನುವ ಮನೋಭಾವ ಇಲ್ಲದ ಇಂತವರ ಅಂಗಡಿಯ ಗ್ರಾಹಕರಾಗಬಾರದು ಎಂಬ ವಾದಗಳು ಈ ಸಂದರ್ಭದಲ್ಲಿ ಪುಷ್ಠಿ‌ಪಡೆಯಿತು.

ನಾನು ನನ್ನ ಸ್ನೇಹಿತರು ಇದೇ ಟ್ರೆಂಡ್ಸ್ ನಲ್ಲಿ ಮೊನ್ನೆ‌ ಮೊನ್ನೆ 4000 ರೂ ಬಟ್ಟೆಗಳನ್ನು ಖರೀದಿಸಿದ್ದೆ, ಇವತ್ತು ಇಂತಹ ಸಂದರ್ಭದಾಗ ಜನ‌ಬರೋದು ಸಹಜ ಎನ್ನುವ ಜ್ಞಾನವು ಅವರಿಗಿಲ್ಲ. ಇನ್ಮೇಲೆ ನಾವ್ಯಾಕೆ‌ ಈ ಟ್ರೆಂಡ್ಸ್ ಶಾಪಿಂಗ್ ಹೋಗುವದು. ನಮ್ಮೆಲ್ಲ ಸ್ನೇಹ ಬಳಗಕ್ಕೂ ಈ ವಿಷಯ‌ ತಿಳಿಸುತ್ತೇವೆ.

– ಅಮೃತ ಹೂಗಾರ. ಮುಖಂಡರು.ಶಹಾಪುರ.

Related Articles

Leave a Reply

Your email address will not be published. Required fields are marked *

Back to top button