ಹೆಸರಲ್ಲಿ ನಾಯಕ ಉಸರಲ್ಲಿ ಗಾಯಕ ಶಿರಸಿಯ ಯುವಕ
ಹೆಸರಲ್ಲಿ ನಾಯಕ ಉಸರಲ್ಲಿ ಗಾಯಕ…!
ಹೆಸರಲ್ಲಿ ಉಮೇಶ್ ನಾಯಕ. ಉಸಿರಲ್ಲಿ ಗಾನ ಗಂಧರ್ವ ನಾಯಕ. ಪ್ರತಿಭೆ ಇದೆ ಅವಕಾಶವಿಲ್ಲ. ಉಮೇಶ ಅವರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಸಂಗೀತ ಮತ್ತು ಲಲಿತ ಕಲೆಗಳಲ್ಲಿ ಉಮೇಶ ಹಲವಾರು ಪ್ರಯೋಗಗಳನ್ನು ಮಾಡಿ , ಸ್ವಯಂ ಪ್ರತಿಭೆಯಿಂದ ಸ್ವಯಂ ಪ್ರಭೆಯನ್ನು ಬೆಳಗುತ್ತಿದ್ದಾರೆ.
ಆದರೆ ಕರುನಾಡಲ್ಲಿ ಇದನ್ನು ಬೆಳಕಾಗಿ ಯಾರು ಸ್ವೀಕರಿಸುತ್ತಿಲ್ಲ. ಬಾಲ್ಯದಲ್ಲಿ ಹಾಡುವ ಹುಚ್ಚು. ತೊದಲು ನುಡಿಗಳು , ನುಡಿದ ದೇವರ ನಾಮವನ್ನು ಅಮ್ಮನ ಪ್ರೋತ್ಸಾಹದಿಂದ ಸಂಗೀತದ ಸವಾಲುಗಳನ್ನು ಸ್ವೀಕರಿಸದರು. ಹಾಗೇ ಕೊಂಕು ನುಡಿಯುವ ಸುತ್ತಮುತ್ತಿಲಿನರ ಜನರ ಮಾತುಗಳನ್ನು ಸವಾಲಾಗಿ ಸ್ವೀಕರಿಸಿದರು.
ಸಂಗೀತವನ್ನು ಏಕಲವ್ಯನಂತೆ ಆರಾಧಿಸಿ, ಗಾನ ಕಲೆಯನ್ನು ಕರಗತ ಮಾಡಿಕೊಂಡ ಇವರು ಶ್ರೇಷ್ಠ ಪ್ರತಿಭೆ ಎಂದರೆ ತಪ್ಪಿಲ್ಲ. ಕಳೆದ ಹಲವಾರು ವರ್ಷಗಳಿಂದ ಈತ ಸಂಗೀತದ ಜೊತೆಗೆ ಸಂಗಾತಿಯಾಗಿ ಜೀವನದ ಮುಖ್ಯವಾಹಿನಿಗೆ ಬರುವ ಯೋಚನೆಯನ್ನು ಹೊಂದಿದ್ದಾರೆ. ಸಂಗೀತವೇ ಬಾಳಿಗೇ ಆಧಾರವಾಗಬೇಕು. ಸಂಗೀತವೇ ಸಾಧನೆಗೆ ಶಿಖರವಾಗಬೇಕೆಂದು ಸದಾ ಹಂಬಲಿಸುತ್ತಿದ್ದಾರೆ.
ಸಾಧನೆ:
ಮೂಲತಃ ಕುಮಟಾ ತಾಲೂಕಿನ ಗೋಕರ್ಣದವರಾದ ಉಮೇಶ್ ಕೇಶವ ನಾಯ್ಕ ಅವರು ಕೇಶವ ನಾಯ್ಕ ಹಾಗೂ ಮೋಹಿನಿ ಕೇಶವ ನಾಯ್ಕ ದಂಪತಿಯ ಪುತ್ರ ಹಾಗೂ ಪದವಿ ವಿದ್ಯಾರ್ಥಿ. ಮಧ್ಯಮ ಕುಟುಂಬದಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ಸಂಗೀತ ಅಂದರೆ ಅಚ್ಚು ಮೆಚ್ಚು. ಮಧ್ಯಕುಟುಂಬದಲ್ಲಿ ಜನಸಿದ ಇವರಿಗೆ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿಯುವ ಮನಸ್ಸಿದ್ದರೂ ಅಂತಹ ವಾತಾವರಣ ಇವರಿಗೆ ಇರಲಿಲ್ಲ.
ಕೇವಲ ಆನಂದದಿಂದ, ಆಸಕ್ತಿಯಿಂದ ಸಂಗೀತವನ್ನು ಕೇಳಿ ಸ್ವತಃ ಕಲಿತುಕೊಂಡರು. ಹಾಗೂ ಇದಕ್ಕೆ ಸ್ಪೂರ್ತಿ ತನ್ನ ಗುರುಗಳಾದ ಪ್ರೊ. ಸತ್ಯನಾರಾಯಣ ಎಂದು ಹೇಳುತ್ತಾರೆ. ಪಿಯುಸಿ , ಪದವಿ, ಹೀಗೆ ಎಲ್ಲಾ ಸಂಗೀತ ಕಾರ್ಯಕ್ರಮದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮತ್ತು ಹಲವಾರು ಕಾರ್ಯಕ್ರಮಗಳಲ್ಲಿ ಆರ್ಕೆಸ್ಟ್ರಾದಲ್ಲಿ ಗೀತೆಯನ್ನು ಹಾಡಿದ್ದಾರೆ.
ತನ್ನ ಚಿಕ್ಕ ವಯಸ್ಸಿನಲ್ಲಿಯೇ ಅಭ್ಯಾಸದ ಜೊತೆ ಸಂಗೀತದ ನಂಟನ್ನು ಬೆಳಸಿಕೊಂಡು ಬಂದವರು. ಚಂದನ ವಾಹಿನಿಯ ಮಧುರ ಮಧುರವೀ ಮಂಜುಳಗಾನ, ಶಿರಸಿಯಲ್ಲಿ ನಡೆದ ರಾಜ್ಯ ಮಟ್ಟದ ಸುಗಮ ಸಂಗೀತ ಕಾರ್ಯಕ್ರಮ ಮತ್ತು ಊಟಿಯಲ್ಲಿ ನಡೆದ ನ್ಯಾಷನಲ್ ಇಂಟಿಗ್ರೇಷನ್ ಕಾರ್ಯಕ್ರಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಸೌರಭ ಶಿರಸಿ, 2007 ರಲ್ಲಿ ಮಂಡ್ಯದಲ್ಲಿ ಗೀತೋತ್ಸವ ಕಾರ್ಯಕ್ರಮ, ಭಟ್ಕಳದಲ್ಲಿ ನಡೆದ ರಾಷ್ಟ್ರೀಯ ಸಂತಕವಿ ಕನಕದಾಸ ಗಾಯನ ಕಾರ್ಯಕ್ರಮ, ಸಿದ್ದಾಪುರದ ಶಿಶಿರ ಸಂಜೆ ಪ್ರತಿಭಾ ಪುರಸ್ಕಾರ ಹೀಗೆ ಹಲವಾರು ಕಾರ್ಯಕ್ರಮಗಳಲ್ಲಿ ಸಂಗೀತ ಕಾರ್ಯಕ್ರಮವನ್ನು ನೀಡಿದ್ದಾರೆ.
ಹಾಗೂ ಸಾಮಾಜಿಕ ಜಾಲಾತಾಣಗಳಲ್ಲಿ ತಮ್ಮ ಸಂಗೀತದ ತುಣುಕುಗಳನ್ನು ಬಿಟ್ಟು ವೀವರ್ಸ್ ಸಂಖ್ಯೆ ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದು ಜನರು ಇಷ್ಟ ಪಡುತ್ತಾರೆ.
ಸಂಗೀತ ಮನಷ್ಯ ಒಂಟಿಯಾಗಿದ್ದಾಗ ಸಂಗಾತಿಯಾಗುತ್ತದೆ. ಇಂತಹ ಸಂಗೀತಕ್ಕೆ ಉಮೇಶ್ ನಾಯಕನಾಗಿ ಗಾಯಕನಾಗಲು ಹೊರಟಿದ್ದಾನೆ. ಈತನ ಗಾಯನಕ್ಕೆ ಎಲ್ಲರೂ ಕಿವಿ ತೆರೆದು ಮನತುಂಬಿ ಆಶೀರ್ವದಿಸೋಣ.
-ಯಶಸ್ವಿ ದೇವಾಡಿಗ .ಶಿರಸಿ
. *ಉತ್ತರಕನ್ನಡ*
ಒಳ್ಳೆಯ ಬರಹ, ಭರಸೆಯ ಯುವ ಲೇಖಕಿ ಹಾಗೂ ಪತ್ರಿಕರ್ತೆಗೆ ಅಭಿನಂದನೆಗಳು