ಬಸವಭಕ್ತಿ
ವಿನಯವಾಣಿ ವಚನ ಸಿಂಚನ : ಶರಣ ಬಾಲಸಂಗಣ್ಣ ವಚನ
ಕಾಬುದು ಜೀವನಲ್ಲ, ಕಾಣಿಸಿಕೊಂಬುದು ಪರಮನಲ್ಲ.
ಅಟ್ಟಿ ಮುಟ್ಟಿ ಹರಿದಾಡುವವು ಕರಣಂಗಳಲ್ಲ.
ಸುಖವನನುಭವಿಸುವವು ಇಂದ್ರಿಯಂಗಳಲ್ಲ.
ಇಂತೀ ಭೇದಂಗಳಲ್ಲಿ ಆರೆಂಬುದ ತಿಳಿದು
ಸಸಿ ವೃಕ್ಷಕ್ಕೆ ನೀರನೆರದಡೆ ಆ ನೀರ ಕುಡಿವುದು
ಬೇರೋ, ಮರನೋ ? ಮೀರಿ ಬೆಳೆದ ಫಲವೋ ?
ಎಂಬುದನರಿದು ತಿಳಿದಲ್ಲಿ,
ಅರಿದರುಹಿಸಿಕೊಂಬ ನಿರಿಗೆಯ ಬಲ್ಲ,ಆತ ಕಮಠೇಶ್ವರಲಿಂಗವನೊಡಗೂಡಿದ ಶರಣ.
-ಬಾಲಸಂಗಣ್ಣ