ಪ್ರಮುಖ ಸುದ್ದಿ

ಮಾಜಿ ಸಚಿವ, ಹೈಕ ಹೋರಾಟಗಾರ ವೈಜನಾಥ‌ ಪಾಟೀಲ್ ಇನ್ನಿಲ್ಲ

ಮಾಜಿ ಸಚಿವ, ಹೈಕ ಹೋರಾಟಗಾರ ವೈಜನಾಥ‌ ಪಾಟೀಲ್ ವಿಧಿವಶ

ಬೆಂಗಳೂರಃ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹೈದ್ರಾಬಾದ್ ಕರ್ನಾಟಕ ವಿಶೇಷ ಸ್ಥಾನಮಾನಕ್ಕಾಗಿ ಹೋರಾಟ ಆರಂಭಿಸಿದ ಪ್ರಮುಖ ರೂವಾರಿ ಮಾಜಿ ಸಚಿವ ವೈಜನಾಥ ಪಾಟೀಲ(82) ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಮತಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ, ಒಂದು ಬಾರಿ ಎಂಎಲ್ಸಿಯಾಗಿ ಆಯ್ಕೆಯಾಗಿದ್ದರು. ರಾಮಕೃಷ್ಣ ಹೆಗಡೆ ಮತ್ತು‌ ದೇವೆಗೌಡರ ಆಡಳಿತದಲ್ಲಿ ಸಚಿವರಾಗಿ‌ ಕಾರ್ಯನಿರ್ವಹಿಸಿದ್ದರು.

ಹೈಕ ಪ್ರತ್ಯೇಕ ರಾಜ್ಯಕ್ಕಾಗಿಯೂ ಇವರು ಹೋರಾಟ ನಡೆಸಿದ್ದರು. ಈ ಭಾಗದ ಹಲವಾರು‌ ಸಮಸ್ಯೆಗಳ ಪರಿಹಾರಕ್ಕೆ ಹೋರಾಟದ‌ ಮೂಲಕ ಸರ್ಕಾರದ ಗಮನ ಸೆಳೆದು ಪರಿಹರಿಸುವ ಛಲಗಾರರಾಗಿದ್ದರು.

ಇಂತಹ ಧೀಮಂತ ನಾಯಕರನ್ನು ಕಳೆದುಕೊಂಡ ಕಲ್ಯಾಣ ಕರ್ನಾಟಕ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದರೆ ತಪ್ಲಿಲ್ಲ. ಚಿಂಚೋಳಿಯ ಅವರ ತೋಟದಲ್ಲಿ ನಾಳೆ ರವಿವಾರ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸುವೆ.

Related Articles

Leave a Reply

Your email address will not be published. Required fields are marked *

Back to top button