ಕ್ಯಾಂಪಸ್ ಕಲರವ

ತರಕಾರಿ ವ್ಯಾಪಾರ ನಡೆಸಿದ ಬಚಪನ್ ಶಾಲಾ ಮಕ್ಕಳು

ಪ್ರಾಯೋಗಿಕ ತರಕಾರಿ ಮಾರುಕಟ್ಟೆಯಲ್ಲಿ ಮಕ್ಕಳ ವ್ಯಾಪಾರ

ಯಾದಗಿರಿ, ಶಹಾಪುರಃ ಪಟ್ಟಣದ ಬಚಪನ್ ಪ್ಲೆ ಸ್ಕೂಲಿನಲ್ಲಿ ಇಂದು ಮಕ್ಕಳಿಗಾಗಿ ತರಕಾರಿ ಮಾರುಕಟ್ಟೆ ವ್ಯವಹಾರ ವಹಿವಾಟು ಕುರಿತು ತಿಳಿಸಲು ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಮುಖ್ಯಸ್ಥ ಶಿವಕುಮಾರ ಆದೋನಿ, ಶಾಲಾ ಮಕ್ಕಳಿಗೆ ರೈತರು ಬೆಳೆದ ತರಕಾರಿಯನ್ನು ಮಾರುಕಟ್ಟೆಗೆ ತಂದು ವಹಿವಾಟು ನಡೆಸುವ ಹಾಗೂ ಹಣಕಾಸಿನ ಲೆಕ್ಕ-ಪತ್ರಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸುವ ಉದ್ದೇಶದಿಂದ ಈ ವ್ಯವಸ್ಥೆ ಕಲ್ಪಿಸಲಾಗಿತ್ತು.
ಇಂತಹ ಕಾರ್ಯಕ್ರಮ ಮೂಲಕ ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಬೆಳೆಸಲಾಗುತ್ತಿದೆ ಎಂದು ತಿಳಿಸಿದರು.

ತರಕಾರಿ ಮಾರುಕಟ್ಟೆಯಂತೆ ಮಕ್ಕಳಿಗೆ ತರಕಾರಿ ಮಾರಾಟ ಮಾಡಲು ವ್ಯವಹರಿಸಲು ಥೇಟ್ ಮಾರುಕಟ್ಟೆ ವ್ಯವಸ್ಥಗೊಳಿಸುವ ಮೂಲಕ ಮಕ್ಕಳಿಗೆ ಜವಬ್ದಾರಿ ನೀಡಲಾಗಿತ್ತು. ಎಲ್.ಕೆ.ಜಿ ಯಿಂದ ಮೂರನೇ ತರಗತಿ ಮಕ್ಕಳು ಮಾರುಕಟ್ಟೆಯಲ್ಲಿ ಉತ್ತಮ ವಹಿವಾಟು ನಡೆಸಿದರು.

ಅಲ್ಲದೆ ಮಾರಾಟ ಕುರಿತು ಸಮರ್ಪಕ ಲೆಕ್ಕಪತ್ರವನ್ನು ಆಯಾ ಶಿಕ್ಷಕರಿಗೆ ಒಪ್ಪಿಸಿದರು. ಜೊತೆಯಲ್ಲಿ ಶಿಕ್ಷಕರು ನಿರ್ದೇಶನ ನೀಡಿದಂತೆ ಮಕ್ಕಳು ವ್ಯಾಪಾರ ವಹಿವಾಟು ನಡೆಸಿದರು. ಸಾಕಷ್ಟು ಜನರ ಪಾಲಕರು ಭಾಗವಹಿಸಿ ತರಕಾರಿ ಖರೀಧಿಸುವ ಮೂಲಕ ಪ್ರೋತ್ಸಾಹ ನೀಡಿದರು.

ಶಾಲೆಯ ಮುಖ್ಯ ಶಿಕ್ಷಕಿ ಸುಜ್ಷಾನಿ ಹಿರೇಮಠ ಆದೋನಿ, ಪ್ರೀತಿ, ಶೇರಿನ್, ಶಂಕ್ರಮ್ಮ, ಅಭಿನಂದಾ ಗೋಗಿ, ರೋಜಾ, ಶ್ವೇತಾ, ಸವಿತಾ, ಫರ್ನಾಜ್, ಜಿತೇಂದ್ರ, ಸುಂದರಮ್ಮ ಉಪಸ್ಥಿತರಿದ್ದರು. ಶಾಲೆಯ ಮಕ್ಕಳಾದ ಕು. ಶ್ರೀನಿಧಿ, ಲಕ್ಷ ಜೈನ್, ಭಕ್ತಿ, ಆರುಣಿ, ಸ್ಫೂರ್ತಿ ಮೋಟಗಿ, ಸ್ಪರ್ಶಾ, ಅಕ್ಷರಾ, ಅಖಿಲೇಶ, ಪ್ರೇರಣಾ, ಆರುಶ್, ಸಂಜನಾ, ವಿಭಾ, ಅಭಿನವ, ಕಾರ್ತಿಕಯ್ಯ, ವಿಶ್ವನಾಥ, ಪುನಿತ, ಅನುಷ್ಕಾ, ಸಂಕೇತ ಹೆಚ್ಚಿನ ಮಕ್ಕಳು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button