ಶಹಾಪುರಃ ವಿಷ್ಣು ಅಭಿಮಾನಿಗಳಿಂದ ಜನ್ಮ ದಿನಾಚರಣೆ
ವಿಷ್ಣು ಓರ್ವ ಆದರ್ಶ ಕಲಾವಿದ- ಆದೋನಿ
ಯಾದಗಿರಿ, ಶಹಾಪುರಃ ಚಿತ್ರರಂಗದ ದಿಗ್ಗಜರಾಗಿದ್ದ ಸಾಹಸ ಸಿಂಹ ವಿಷ್ಣುವರ್ಧನ ಅವರ 69 ನೇ ಜನ್ಮದಿನವನ್ನು ರಾಷ್ಟ್ರೀಯ ಆದರ್ಶ ದಿನಾಚರಣೆಯನ್ನಾಗಿ ಆಚರಣೆಗೆ ರಾಜ್ಯದಾದ್ಯಂತ ಚಾಲನೆ ನೀಡಿದ ವಿಷ್ಣು ಸೇನಾ ಸಮಿತಿ ಕಾರ್ಯ ಶ್ಲಾಘನೀಯವಾದದು ಎಂದು ಬಚಪನ್ ಶಾಲಾ ಮುಖ್ಯಸ್ಥ ಶಿವಕುಮಾರ ಆದೋನಿ ಹೇಳಿದರು.
ನಗರದ ವಿದ್ಯಾಜ್ಯೋತಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ವಿಷ್ಣುವರ್ಧನ ಅವರ 69 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ವಿಷ್ಣು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ವಿಷ್ಣುವರ್ಧನ ಅವರ ಹಲವಾರು ಚಿತ್ರಗಳನ್ನು ನೋಡಿ ಎಷ್ಟೋ ಜನರು ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡು ಉತ್ತಮ ಜೀವನ ನಡೆಸುತ್ತಿದ್ದಾರೆ. ಅಂತಹ ಪ್ರೇರಣಾ ಶಕ್ತಿಯನ್ನು ವಿಷ್ಣು ಸರ್ ಅವರು ತಮ್ಮ ಕಲೆ ಮೂಲಕ ನೀಡಿದ್ದಾರೆ. ಅವರೊಬ್ಬ ಆದರ್ಶ ಕಲಾವಿದರಾಗಿದ್ದರು ಎಂದರು.
ಸಸಿ ನೆಡುವ ಕಾರ್ಯಕ್ರಮಕ್ಕೆ ಪತ್ರಕರ್ತ ಮಲ್ಲಿಕಾರ್ಜುನ ಮುದ್ನೂರ ಚಾಲನೆ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶೀಲವಂತ, ಪಿಡ್ಡಪ್ಪ, ಗುರಣ್ಣ ನಾಗನಟಗಿ, ಈರಣ್ಣ, ವಿಷ್ಟುವರ್ಧನ ಅಭಿಮಾನಿ ಸಂಘದ ತಾಲೂಕು ಅಧ್ಯಕ್ಷ ಉದಯಕುಮಾರ ಅಜ್ಜಿಕೊಲ್ಲಿ, ಉಪಾದ್ಯಕ್ಷ ಮಹೇಶ ಅನವಾರ, ನಾಗರಾಜ, ಯಲ್ಲಪ್ಪ, ಮಲ್ಲಿಕಾರ್ಜುನ ಹುರಸಗುಂಡಗಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವೃಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.