ಪ್ರಮುಖ ಸುದ್ದಿ
ಉಕ ಭಾಗದವರೇ ಮುಂದಿನ ಸಿಎಂ- ಯತ್ನಾಳ ಭವಿಷ್ಯ
ಉಕ ಭಾಗದವರೇ ಮುಂದಿನ ಸಿಎಂ- ಯತ್ನಾಳ ಭವಿಷ್ಯ
ವಿಜಯಪುರಃ ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆದಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರೇ ಈ ಕುರಿತು ಸಿಎಂ ವಿರುದ್ಧ ನಗರದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ಮತ್ತೆ ಬಿಎಸ್ವೈ ವಿರುದ್ಧ ಬಹಿರಂಗವಾಗಿಯೇ ಮಾತನಾಡಿದ ಯತ್ನಾಳ, ಯಡಿಯೂರಪ್ಪ ನವರು ಬಹಳ ದಿನಗಳ ಕಾಲ ಇರುವದಿಲ್ಲ. ಕೇಂದ್ರ ಬಿಜೆಪಿ ನಾಯಕರಿಗೆ ಬೇಸರವಾಗಿದ್ದಾರೆ. ಹೀಗಾಗಿ ಬದಲಾವಣೆ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹೇಳುವ ಮೂಲಕ ಬಾಂಬ್ ಸಿಡಿಸಿದ್ದಾರೆ.
ಅಲ್ಲದೆ ಯಡಿಯೂರಪ್ಪ ನಂತರದಲ್ಲಿ ಉತ್ತರ ಕರ್ನಾಟಕ ದವರೇ ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.