ಪ್ರಮುಖ ಸುದ್ದಿ

ಗಾನಗಾರುಡಿಗ SPB ಚೇತರಿಕೆಗೆ ಕಾರಣನಾರು ಗೊತ್ತಾ.?

ಗಾನಕೋಗಿಲೆ SPB ಚೇತರಿಕೆಗೆ ಕಾರಣವೇನು.? ಗೊತ್ತಾ.?
ವಿವಿ ಡೆಸ್ಕ್ಃ ಗಾನದಿಗ್ಗಜ ಎಸ್.ಪಿ. ಬಾಲಸುಬ್ರಹ್ಮಣ್ಯಂ ಕೊರೊನಾ ಸೋಂಕು ತಗುಲಿರುವ ಕಾರಣ ಕಳೆದ 15 ದಿನದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆದರೆ ಅವರ ಮಗ, ಕುಟುಂಬ ಸೇರಿದಂತೆ ಅವರ ಅಪಾರ‌ ಅಭಿಮಾನಿ ಬಳಗದ‌ ಕಣ್ಣಾಲೆ ಹಸಿಯಾಗಿಯಿಸಿಕೊಂಡೇ ದೇವರ ಮೊರೆ ಹೋಗಿದ್ದಾರೆ. ಈ‌ ನಡುವೆ ಎಸ್.ಪಿ.ಬಿ. ಕೊರೊನಾ ಸೋಂಕಿನ ಕೂಪದಿಂದ ಚೇತರಿಕೆಗೊಂಡು ಹೊರ ಬಂದಿದ್ದಾರೆ.

ಕೊರೊನಾ ಮೊದಲ ಆಪತ್ತಿನಿಂದ ಹೊರ ಬರಲು ಗಾನಗಂಧರ್ವನಿಗೆ‌ ಗಾನಗಂಧರ್ವನೇ ಸರಿಸಾಟಿ ಎಂಬಂತೆ ಎಸ್.ಪಿ.ಬಿ. ಅವರು ಆಸ್ಪತ್ರೆಯಲ್ಲಿ ನಿತ್ಯ‌ ಪಠಿಸಿದ ಮೃತ್ಯುಂಜಯ ಮಂತ್ರವೇ ಅವರನ್ನು ಮೃತ್ಯುಕೂಪದಿಂದ ಹೊರಬರಲು ಸಹಕಾರಿಯಾಗಿದೆ ಎಂದರೆ ಒಪ್ಪಲೇಬೇಕು.

ಇನ್ನೇನು ಗಾನದಿಗ್ಗಜ‌ ಎಸ್.ಪಿ.ಬಿ‌. ಹೋಗಿ‌ ಬಿಟ್ಟರೆಂದು ಶ್ರದ್ಧಾಂಜಲಿ ಅರ್ಪಿಸಿದ ಘಟನೆಯು ಜರುಗಿತ್ತು.
ಈ ಮಧ್ಯ SPB ಅವರ ಮಗ ಈ‌ ಕುರಿತು ಸ್ಪಷ್ಟ ಪಡಿಸಿದ ಮೇಲೆಯೇ ಅವರು ಮತ್ತೊಮ್ಮೆ ಹುಟ್ಟಿ ಬಂದಿದ್ದರು.

ಇದೀಗ ಅವರ ಮಗನೇ ಹೇಳುತ್ತಿರುವಂತೆ ಗಾನಕೋಗಿಲೇ ದಿನೇ ದಿನೇ ಚೇತರಿಸಿಕೊಳ್ಳುತ್ತಿದ್ದಾರೆ.  ಆಸ್ಪತ್ರೆಯಲ್ಲಿ ನಿರಂತರ ಮೃತ್ಯುಂಜಯ ಮಂತ್ರ‌ ಧ್ವನಿ ಕೇಳುವ‌ ತಾಂತ್ರಿಕ ವ್ಯವಸ್ಥೆ ಮತ್ತು ‌ಎಸ್.ಪಿ.ಬಿ. ಮನದಿ ಪಠಿಸುತ್ತಿರುವ ಮೃತ್ಯುಂಜಯ ಮಂತ್ರವೇ ಪವಾಡ ಸದೃಶವಾಗಿ ನನ್ನನ್ನು ಬದುಕಿಸಲಿದೆ ಎಂಬ ನಂಬಿಕೆಯನ್ನು ಎಸ್.ಪಿ.ಬಿ. ಹೊಂದಿದ್ದಾರೆ ಎನ್ನಲಾಗಿದೆ.

ಅಪಾರ ದೈವ ಭಕ್ತಿ ಹೊಂದಿರುವ ಗಾನಗಾರುಡಿಗನ ಜೀವಕ್ಕೆ ಬಂದ ಕೊರೊನಾ ಅಪಾಯವನ್ನು ಅವರ ನಂಬಿಕೆಯೇ ಅವರನ್ನು ಬದುಕುಳಿಸಲಿದೆ ಎಂಬ ಮಾತುಗಳು‌ ಕೇಳಿ ಬರುತ್ತಿವೆ. ಅದರಂತೆ ಅವರು ಸಾಕಷ್ಟು ಚೇತರಿಕೆಯನ್ನು ಕಾಣುತ್ತಿರುವದು ಇದಕ್ಕೆ ಸಾಕ್ಷಿಯಾಗಿದೆ.

ಮೃತ್ಯುಂಜಯ ಮಂತ್ರದ ಮೂಲಕ ಎಸ್.ಪಿ.ಬಿ. ಅವರು ಪ್ರಜ್ಞೆ ಕಂಡುಕೊಂಡಿದ್ದಾರೆ.‌ ಹೀಗಾಗಿ ಕೊರೊನಾ ಗೆದ್ದಿದ್ದಾರೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಕೂಡಲೇ ಗಾನಕೋಗಿಲೇ ಮತ್ತೆ ಹಾಡು ಹಾಡುವಂತಾಗಲಿ‌, ಶೀಘ್ರ ಗುಣಮುಖರಾಗಲಿ ಎಂಬುದೇ ವಿನಯವಾಣಿ ಆಶಯ.

Related Articles

Leave a Reply

Your email address will not be published. Required fields are marked *

Back to top button