ಶ್ರೀಶೈಲದಲ್ಲಿ ಭಕ್ತರ ದಾಹ ತಣಿಸುವ ಮಜ್ಜಿಗೆ ದಾಸೋಹ
ಜಗದ್ಗುರು ಪಂಡಿತಾರಾಧ್ಯ ಸೇವಾ ಸಮಿತಿಯಿಂದ ಉಚಿತ ವಿತರಣೆ
ಶ್ರೀಶೈಲದಲ್ಲಿ ಭಕ್ತರ ದಾಹ ತಣಿಸಿದ ಮಜ್ಜಿಗೆ ದಾಸೋಹ
ಜಗದ್ಗುರು ಪಂಡಿತಾರಾಧ್ಯ ಸೇವಾ ಸಮಿತಿಯಿಂದ ಉಚಿತ ವಿತರಣೆ
ವಿನಯವಾಣಿ, ಶ್ರೀಶೈಲಃ ಬೇಸಿಗೆಯ ಬಿರುಬಿಸಿಲಿನಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದರ್ಶನಕ್ಕೆ ಆಗಮಿಸುವ ಭಕ್ತರ ದಾಹ ತಣಿಸಲು ಜಗದ್ಗುರು ಪಂಡಿತಾರಾಧ್ಯ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ನಿರಂತರವಾಗಿ ಉಚಿತ ಮಜ್ಜಿಗೆ ವಿತರಣೆ ಸೇವಾ ಕಾರ್ಯ ನಡೆಯುತ್ತಿದೆ.
ಬೇಸಿಗೆ ಆರಂಭಗೊಂಡ ಏಪ್ರೀಲ್ ನಿಂದಲೇ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಉಚಿತ ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಪೀಠದ ಮುಖ್ಯ ವ್ಯವಸ್ಥಾಪಕ ಎಂ.ಬಿ.ಮಂಜುನಾಥ ಸ್ವಾಮಿ ಮಾಹಿತಿ ನೀಡಿದರು.

ದೇವಸ್ಥಾನದ ಹೊರ ಆವರಣದ ಶ್ರೀ ವಾಯು ಕಟ್ಟಡದ ಬಳಿ ಮರದ ಕೆಳಗೆ ಶಾಮಿಯಾನ ಹಾಕಿ ವ್ಯವಸ್ಥೆ ಮಾಡಲಾಗಿತ್ತು. ದೊಡ್ಡ ದೊಡ್ಡ ಮಣ್ಣಿನ ಮಡಿಕೆಗಳಲ್ಲಿ ತಯಾರಿಸಿದ ತಂಪು ಮಜ್ಜಿಗೆಯನ್ನು ಸ್ವಯಂ ಸೇವಕರು ಭಕ್ತರಿಗೆ ವಿತರಿಸುತ್ತಿದ್ದರು. ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಮಜ್ಜಿಗೆ ಸೇವಿಸಿ ದಣಿವಾರಿಸಿಕೊಂಡ ಭಕ್ತರು ಸೇವಾ ಸಮಿತಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಕಾಲೇಜು ರಜೆಗಳಿರುವದರಿಂದ ಕರ್ನಾಟಕದಿಂದಲೂ ಸಾಕಷ್ಟು ಭಕ್ತರು ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತೆರಳಿದ್ದರು, ಅಲ್ಲಿಯ ಸೇವಾ ಸಮಿತಿಯಿಂದ ಮಜ್ಜಿಗೆ ಸೇವೆ ಕಂಡು ತಾವೂ ಮಜ್ಜಿಗೆ ಸೇವಿಸಿ ಹೊಟ್ಟೆ ಮತ್ತು ಮಂಡೆ ತಂಪಾಗಿಸಿಕೊಂಡು ಸೇವಾ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಶ್ರೀಶೈಲದಲ್ಲೂ ಕರ್ನಾಟಕದ ಕಲ್ಯಾಣ ಕರ್ನಾಟಕ ಭಾಗದಂತೆ ಬಿಸಿಲಿನ ತಾಪ ಜಾಸ್ತಿ ಇರುವದನ್ನು ಗಮನಿಸಿದ ಅವರು ಅಂದಾಜು ಶ್ರೀಶೈಲದಲ್ಲಿನ ಉಷ್ಣಾಂಶ 42 ಡಿಗ್ರಿ ಇದೆ ಎಂದು ಭಕ್ತರೊಬ್ಬರು ತಿಳಿಸಿದರು.
ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ಶ್ರೀಶೈಲದ ಜಗದ್ಗುರು ಪಂಡಿರಾಧ್ಯ ಸೇವಾ ಸಮಿತಿಯಿಂದ ಭಕ್ತರಿಗೆ ಉಚಿತ ಮಜ್ಜಿಗೆ ವಿತರಣಾ ಸೇವಾ ಕಾರ್ಯ ನಡೆಸಲಾಗುತ್ತದೆ ಎಂದು ಸಮಿತಿಯ ಸೇವಾ ಕಾರ್ಯಕರ್ತರೊಬ್ಬರು ಮಾಹಿತಿ ನೀಡಿದರು.




