ಪ್ರಮುಖ ಸುದ್ದಿಮಹಿಳಾ ವಾಣಿ

ಅನಿಷ್ಟ ಪದ್ಧತಿ ತಡೆ ನಮ್ಮೆಲ್ಲರ ಕರ್ತವ್ಯ – ಶೈಲಜಾ ಹೊನ್ನಾರಡ್ಡಿ

ಬೀದಿ ನಾಟಕ‌ ಮೂಲಕ ಧರ್ಮಸ್ಥಳ ಸಂಸ್ಥೆ ಜಾಗೃತಿ ಕಾರ್ಯಕ್ರಮ

ಬೀದಿ ನಾಟಕದ ಮೂಲಕ ಜನ ಜಾಗೃತಿ ಕಾರ್ಯಕ್ರಮ

ಬೀದಿ ನಾಟಕ‌ ಮೂಲಕ ಧರ್ಮಸ್ಥಳ ಸಂಸ್ಥೆ ಜಾಗೃತಿ ಕಾರ್ಯಕ್ರಮ

ವಿನಯವಾಣಿ
ಯಾದಗಿರಿ, ಶಹಾಪುರ: ಬಾಲ್ಯ ವಿವಾಹ ಮತ್ತು ಲೈಂಗಿಕ ದೌರ್ಜನ್ಯ ತಡೆಗಟ್ಟುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಸಮಾಜದಲ್ಲಿ ಪ್ರತಿಯೊಬ್ಬರೂ ಈ ಬಗ್ಗೆ ಜಾಗೃತರಾಗಿರಬೇಕೆಂದು ನ್ಯಾಯವಾದಿ ಶೈಲಜಾ ಹೊನ್ನಾರಡ್ಡಿ ತಿಳಿಸಿದರು.

ನಗರದ ಸರ್ಕಾರಿ ಕನ್ಯಾ ಪ್ರೌಢ ಶಾಲೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಶಹಾಪುರ ಶಾಖೆಯಿಂದ ನಡೆದ ಬೀದಿ ನಾಟಕ ಚಾಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಸ್ತುತ ಕಾಲಮಾನದಲ್ಲಿ ಮಕ್ಕಳ ಉಜ್ವಲ ಭವಿಷ್ಯ ಮತ್ತು ಸುರಕ್ಷತೆ ಅತ್ಯಂತ ಅವಶ್ಯಕವಾಗಿದೆ. ಆ ನಿಟ್ಟಿನಲ್ಲಿ ಪಾಲಕರು, ಶಿಕ್ಷಕರು ಸೇರಿದಂತೆ ಹೆಣ್ಣುಮಕ್ಕಳಿಗೆ ತಮಗಾಗುವ ಅನ್ಯಾಯವನ್ನು ಪ್ರಶ್ನಿಸುವ ದಿಟ್ಟತನವನ್ನು ಬೆಳೆಸಬೇಕಿದೆ ಎಂದರು.
ಕಾಳಿಕಾದೇವಿ ಜ್ಞಾನ ವಿಕಾಸ ಕೇಂದ್ರದ ತಂಡದಿಂದ ಬೀದಿ ನಾಟಕ ಪ್ರದರ್ಶನ ಜರುಗಿತು. ಮತ್ತು ಕಲ್ಬುರ್ಗಿಯ ಶ್ರೀಸಾಯಿ ಜನ ಜಾಗೃತಿ ಕಲಾ ಸಂಘದವರಿಂದ ಬಾಲ್ಯ ವಿವಾಹ,‌ ಲೈಂಗಿಕ ದೌರ್ಜನ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದಾಗು ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಿದರು.
ಪ್ರಾಸ್ತಾವಿಕವಾಗಿ ಶಾಖಾ ಯೋಜನಾಧಿಕಾರಿಯಾದ ಕುಮಾರ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲ ವೈ.ಎಚ್.ವಜ್ಜಲ್, ಜಿಲ್ಲಾ ಜನ ಜಾಗೃತಿ ವೇದಿಕೆ ಯೋಜನಾಧಿಕಾರಿ ರಾಜೇಶ, ಮೇಲ್ವಿಚಾರಕಿ ರಾಜೇಶ್ವರಿ,‌ ಸಮನ್ವಯಧಿಕಾರಿ ಶೋಭಾ, ಸೇವಾ ಪ್ರತಿನಿಧಿ ಸರಿತಾ, ಶಿವಕಾಂತಮ್ಮ ಸೇರಿದಂತೆ ಶಿಕ್ಷಕ ವೃಂದ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬೀದಿ ನಾಟಕದ ಮೂಲಕ ಕಲಾವಿದರು ಹಲವು ಅನಿಷ್ಠತೆಯ ಮೇಲೆ ಬೆಳಕು ಚಲ್ಲುವ ಮೂಲಕ ಜಾಗೃತಿ ಮೂಡಿಸಿದರು.

ವರದಿ- ಮಲ್ಲಿಕಾರ್ಜುನ ಮುದ್ನೂರ

Related Articles

Leave a Reply

Your email address will not be published. Required fields are marked *

Back to top button