ಹೊರ ಗುತ್ತಿಗೆ ನೌಕರರ ಸಂಘದ ರಾಜ್ಯ ಸಮಿತಿಗೆ ಮಲ್ಲು ನಗನೂರ ಆಯ್ಕೆ
ರಾಜ್ಯ ಹೊರ ಗುತ್ತಿಗೆ ನೌಕರರ ಸಂಘ ಬೆಂಗಳೂರ
ಹೊರ ಗುತ್ತಿಗೆ ನೌಕರರ ಸಂಘದ ರಾಜ್ಯ ಸಮಿತಿ ಸದಸ್ಯರಾಗಿ ನಗನೂರ ನೇಮಕ
ಹೊರ ಗುತ್ತಿಗೆ ನೌಕರರ ಸಂಘದ ರಾಜ್ಯ ಸಮಿತಿಗೆ ಮಲ್ಲು ನಗನೂರ ಆಯ್ಕೆ
ವಿನಯವಾಣಿ ಸಮಾಚಾರ
ಶಹಾಪುರ: ಹೊರ ಗುತ್ತಿಗೆ ನೌಕರರ ಸಂಘದ ರಾಜ್ಯ ಸಮಿತಿಯ ಸದಸ್ಯರಾಗಿ ಇಲ್ಲಿನ ಮಲ್ಲಿಕಾರ್ಜುನ ನಗನೂರ ನೇಮಿಸಿ ಸಂಘದ ರಾಜ್ಯಧ್ಯಕ್ಷ ಸುಧಾಕರ ಆದೇಶಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸಂಘದ ಕಾರ್ಯಕ್ರಮದಲ್ಲಿ ನಗನೂರ ಅವರಿಗ ಲೆ ಆದೇಶ ಪತ್ರ ನೀಡಿ, ಯಾದಗಿರಿ ಜಿಲ್ಲೆಯಿಂದ ರಾಜ್ಯ ಸಮಿತಿಗೆ ನೇಮಿಸಿದ್ದು, ಆ ಭಾಗದಲ್ಲಿ ಸಂಘಟನಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸುವ ಮೂಲಕ ಸಂಘವನ್ನು ಕಟ್ಟಬೇಕು. ಸಂಘದ ಸದಸ್ಯ ಸಮಸ್ಯೆಗಳಿಗೆ ಹೋರಾಟದ ಮೂಲಕ ಸ್ಪಂಧಿಸುವ ಕಾರ್ಯ ಮಾಡಬೇಕೆಂದು ನಿರ್ದೇರ್ಶಿಸಿದ್ದಾರೆ. ಮತ್ತು ರಾಜ್ಯ ಮಟ್ಟದಲ್ಲಿ ಸಂಘ ಕೈಗೊಳ್ಳುವ ನಿರ್ಧಾರ, ನಿರ್ದೇಶನದಂತೆ ಯಾವುದೇ ಸಂಘಟನಾತ್ಮಕ ಚಟುವಟಿಕೆಯಲ್ಲಿ ಮತ್ತು ಹೋರಾಟದಲ್ಲಿ ಭಾಗವಹಿಸಬೇಕು. ಸಂಘದ ಏಳ್ಗೆಗೆ ಪ್ರಾಮಾಣಿಕವಾಗಿ ಶ್ರಮವಹಿಸಬೇಕೆಂದು ರಾಜ್ಯದ್ಯಕ್ಷರು ನಿರ್ದೇಶನ ನೀಡಿದರು. ನೂತನ ರಾಜ್ಯ ಪರಿಷತ್ ಸದಸ್ಯ ನಗನೂರ ಅವರು, ನ್ಯಾಯಯುತ ಸೇವೆ ಸಂಘಕ್ಕೆ ಸಲ್ಲಿಸುವೆ ಎಂದು ವಾಗ್ದಾನ ಮಾಡಿದರು. ಯಾದಗಿರಿ ಜಿಲ್ಲೆಯ ಅವರ ಸ್ನೇಹ ಬಳಗ ಮತ್ತು ಶಹಾಪುರ, ಸುರಪುರ, ಯಾದಗಿರಿ ಅವರ ತಾಲ್ಲೂಕು ಘಟಕ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.




