ಸಿಎಂ ಸಿದ್ದರಾಮಯ್ಯ 2 ದಿನದಲ್ಲಿ ರಾಜೀನಾಮೆ?
ದೆಹಲಿಯಲ್ಲಿ ಹೈಡ್ರಾಮಾ
ವಿನಯವಾಣಿ, ಬೆಂಗಳೂರಃ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ 2 ದಿನಗಳಲ್ಲಿ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಅರ್ಹಮೂಲಗಳಿಂದ ತಿಳಿದು ಬಂದಿದೆ.
ದೆಹಲಿಯಲ್ಲಿ ಇಂದು ಮಂಗಳವಾರ ನಡೆದ ಹೈಕಮಾಂಡ್ ಸಭೆಯಲ್ಲಿ *ನಾಯಕತ್ವ ಬದಲಾವಣೆ ಹಿನ್ನೆಲೆ ಸಿದ್ದರಾಮಯ್ಯಗೆ ಸೂಚನೆ* ನೀಡಲಾಗಿದೆ ಎಂದು ತಿಳಿದು ಬಂದಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ಪಕ್ಷ ಒಲವು ತೋರಿದೆ ಎನ್ನಲಾಗಿದೆ. ರಾಜ್ಯಸಭೆಗೆ ಸಿದ್ರಾಮಯ್ಯನವರನ್ನು ಕಳುಹಿಸುವ ಜೊತೆಗೆ ಅವರ ಮಗ ಯತೀಂದ್ರ ಅವರನ್ನು ಉಪ ಮುಖ್ಯಮಂತ್ರಿ ಮಾಡಲಾಗುವದೆಂದು ಹೈಕಮಾಂಡ್ ಭರವಸೆ ನೀಡಿದೆ ಎನ್ನಲಾಗಿದೆ.
ಆದರೆ ಸಿಎಂ ಸಿದ್ರಾಮಯ್ಯ ಇದಕ್ಯಾವದಕ್ಕೂ ಒಪ್ಪದೆ ಒಂದೆರಡು ದಿನ ಕಾಲವಕಾಶ ಕೇಳಿದ್ದಾರೆಂದು ತಿಳಿದು ಬಂದಿದೆ. ಒಟ್ಟಾರೆ ಹೈಕಮಾಂಡ ಸಿಎಂ ಬದಲಾವಣೆಗೆ ದಿಟ್ಟ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಅದರಲ್ಲೂ ಭವಿಷ್ಯದ ಕೈ ನಾಯಕಿ ಪ್ರಿಯಾಂಕಾ ಅವರು ಡಿಕೆಶಿ ಸಿಎಂ ಮಾಡಲೇಬೇಕು ಎಂದು ನೇರವಾಗಿ ಸಭೆಯಲ್ಲಿ ಪ್ರಸ್ತುತ ಪಡಿಸಿದ್ದಾರೆ ಎಂದು ಕೈಮೂಲಗಳೇ ತಿಳಿಸುತ್ತಿವೆ.
*ಪ್ರಮುಖ ಅಂಶಗಳು:*
1. *ಶನಿವಾರ CLP ಸಭೆ:* ರಾಜೀನಾಮೆ ಕುರಿತು ಅಂತಿಮ ತೀರ್ಮಾನಕ್ಕೆ ಶನಿವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯುವ ಸಾಧ್ಯತೆ ಇದೆ.
2. *ಸಿದ್ದರಾಮಯ್ಯ ನಕಾರ:* ರಾಜ್ಯಸಭೆಗೆ ಹೋಗುವ ಪ್ರಸ್ತಾವನೆಯನ್ನು ಸಿಎಂ ಸಿದ್ದರಾಮಯ್ಯ ತಿರಸ್ಕರಿಸಿದ್ದು, 1 ದಿನದ ಕಾಲಾವಕಾಶ ಕೇಳಿದ್ದಾರೆ.
3. *ಡಿಕೆಶಿ ಪಟ್ಟು:* 2023ರ ಚುನಾವಣೆ ವೇಳೆ ನೀಡಿದ್ದ “ಅಧಿಕಾರ ಹಂಚಿಕೆ” ಭರವಸೆ ಈಡೇರಿಸಿ ಎಂದು ಡಿ.ಕೆ. ಶಿವಕುಮಾರ್ ಬಣ ಒತ್ತಡ ಹೇರಿದೆ.
4. *ಅಹಿಂದ ಅಸ್ತ್ರ:* ಸಿದ್ದರಾಮಯ್ಯ ಬಣ “ಅಹಿಂದ ಓಟ್ ಬ್ಯಾಂಕ್ಗೆ ಹಿನ್ನಡೆ ಆಗುತ್ತೆ, 2028ರ ಚುನಾವಣೆಗೆ ತೊಂದರೆ” ಎಂದು ವಾದ ಮಂಡಿಸಿದೆ. ಸಿದ್ದರಾಮಯ್ಯ ಕಾಂಗ್ರೆಸ್ಗೆ 25% ಮತ ತರುವ ಮಾಸ್ ಲೀಡರ್ ಅನ್ನೋದು ಅವರ ವಾದ.
ಮುಂದೇನು..? ಸಿದ್ದರಾಮಯ್ಯ ಸುಲಭಕ್ಕೆ ಕುರ್ಚಿ ಬಿಡುವ ಲಕ್ಷಣ ಕಾಣುತ್ತಿಲ್ಲ. ಶಾಸಕರ ಬೆಂಬಲ ಇದೆ ಎಂದು ಅವರ ಬಣ ಹೇಳುತ್ತಿದೆ. ಮುಂದಿನ 48 ಗಂಟೆ ರಾಜ್ಯ ರಾಜಕಾರಣಕ್ಕೆ ನಿರ್ಣಾಯಕ. ಕಾದು ನೋಡಬೇಕಿದೆ.
ಮುಖ್ಯಾಂಶಗಳು
– “ದೆಹಲಿಯಿಂದ ಸಿದ್ದರಾಮಯ್ಯ ರಾಜೀನಾಮೆಗೆ ಗ್ರೀನ್ ಸಿಗ್ನಲ್”
– “ಡಿಕೆಶಿ ಸಿಎಂ ಗಾದಿಗೆ ಹೈಕಮಾಂಡ್ ಮಣೆ”
– “ಅಹಿಂದ ವರ್ಸಸ್ ಒಕ್ಕಲಿಗ ಲೆಕ್ಕಾಚಾರ – ಕಾಂಗ್ರೆಸ್ ಇಕ್ಕಟ್ಟು”




