ಪ್ರಮುಖ ಸುದ್ದಿಬಸವಭಕ್ತಿ

ಏ.29 ರಂದು ಶಹಾಪುರಕ್ಕೆ ಕನ್ನೇರಿ ಶ್ರೀಗಳು..!

ಏ.29 ಕ್ಕೆ ಹಿಂದೂ ಬಸವಾದಿ ಶಿವಶರಣರ ಬೃಹತ್ ಸಮಾವೇಶ

ಏ.29 ಕ್ಕೆ ಹಿಂದೂ ಬಸವಾದಿ ಶಿವಶರಣರ ಬೃಹತ್ ಸಮಾವೇಶ

ಉದಯವಾಣಿ ಸಮಾಚಾರ
ಶಹಾಪುರಃ ಇದೇ ಏ.29 ಕ್ಕೆ ಕನ್ನೇರಿ ಅದೃಶ ಕಾಡಸಿದ್ದೇಶ್ವರ ಮಹಾ ಸ್ವಾಮೀಜಿ ಶಹಾಪುರಕ್ಕೆ ಬರಲಿದ್ದು, ಅಂದು ಸಂಜೆ ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ನಡೆಯುವ ಹಿಂದೂ ಬಸವಾದಿ ಶಿವಶರಣರ ಬೃಹತ್ ಸಮಾವೇಶದ ಕೇಂದ್ರ‌ಬಿಂದುವಾಗಿ ಭಾಗಿಯಾಗಲಿದ್ದು, ನಾಗರಿಕರು, ಹಿಂದೂ ಬಾಂಧವರು ಹೆಚ್ಚುನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಮಾವೇಶ ಯಶಸ್ವಿಗೊಳಿಸಬೇಕೆಂದು ನಗರದ ಕುಂಬಾರ ಓಣಿ ಹಿರೇಮಠದ ಸೂಗೂರೇಶ್ವರ ಶಿವಾಚಾರ್ಯರು ಪ್ರಕಟಣೆ ಮೂಲಕ ಕೋರಿದ್ದಾರೆ.
ಪ್ರಸ್ತುತ ದೇಶದಲ್ಲಿ ಹಿಂದೂ ಬಾಂಧವರನ್ನ ಸಾಮಾಜಿಕವಾಗಿ, ಧಾರ್ಮಿಕವಾಗಿ, ಬೌದ್ಧಿಕವಾಗಿ ಛಿದ್ರಗೊಳಿಸುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿರುವುದು ಖೇದದ ಸಂಗತಿಯಾಗಿದೆ. ಇದೆಲ್ಲವನ್ನು ಮನಗಂಡ ಅದೃಶ ಕಾಡಸಿದ್ದೇಶ್ವರ ಮಹಾಸ್ವಾಮೀಜಿಯವರು, ನಮ್ಮ ಸನಾತನ ಹಿಂದೂ ಸಮಾಜವನ್ನ ಭದ್ರಗೊಳಿಸುವ ನಿಟ್ಟಿನಲ್ಲಿ ಸಮಾವೇಶದಲ್ಲಿ ಭಾಗಿಯಾಗಿ ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡಲಿದ್ದಾರೆ. ಕನ್ನೇರಿ ಶ್ರೀಗಳ ಆಗಮನ ನಮಗೆಲ್ಲರಿಗೂ ದೊರೆತ ಸುವರ್ಣ ಅವಕಾಶವೇ ಸರಿ. ಇದು ಪಕ್ಷಾತೀತ ಕಾರ್ಯಕ್ರಮವಾಗಿದ್ದು, ಧರ್ಮದ ಪರವಾದ, ರಾಷ್ಟ್ರೀಯವಾದಿ ತತ್ವಾಧರಿಸಿದ ಕಾರ್ಯಕ್ರಮ ಇದಾಗಿದೆ. ಕಾರಣ ಸಮಸ್ತ ಹಿಂದೂ ಬಾಂಧವರು ಸಮಾವೇಶದ ಯಶಸ್ವಿಗೆ ಸಹಕರಿಸಬೇಕೆಂದು ಅವರು ಕೋರಿದ್ದಾರೆ. ಕಾರ್ಯಕ್ರಮದ ಆಯೋಜನೆಯನ್ನು ಬಸವಾದಿ ಶಿವಶರಣರ ಹಿಂದೂ ವೇದಿಕೆ ಆತಿಥ್ಯದಲ್ಲಿ ನೆರವೇರಲಿದೆ ಎಂದು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button