ಆತನನ್ನು 18 ಬಾರಿ ಸೋಲಿಸಿದ ಶ್ರೀಕೃಷ್ಣ ಕೊಲ್ಲಲಿಲ್ಲ ಯಾಕೆ.? ಯಾವ ಕಾರಣಕ್ಕೆ ಸುಮ್ಮನಿದ್ದ ಗೊತ್ತಾ..?
ಜರಾಂಧನನ್ನು ೧೮ ಬಾರಿ ಸೋಲಿಸಿದರೂ ಶ್ರೀಕೃಷ್ಣ ಆತನನ್ನ ಕೊಲ್ಲಲೇಕೆ

ಆತನನ್ನು 18 ಬಾರಿ ಸೋಲಿಸಿದ ಶ್ರೀಕೃಷ್ಣ ಕೊಲ್ಲಲಿಲ್ಲ ಯಾಕೆ.? ಯಾವ ಕಾರಣಕ್ಕೆ ಸುಮ್ಮನಿದ್ದ ಗೊತ್ತಾ..!
ಮಲ್ಲಿಕಾರ್ಜುನ ಮುದ್ನೂರ
ವಿವಿ ಡೆಸ್ಕ್ಃ ಮಹಾಭಾರತದಲ್ಲಿ ಶ್ರೀಕೃಷ್ಣನ ಕೈಗೊಳ್ಳುವ ಎಲ್ಲಾ ಕೆಲಸಗಳ ಹಿಂದೆ ಸದಾ ಒಂದು ಉದ್ದೇಶವಿತ್ತು.
ಆರಂಭದಲ್ಲಿ ಶ್ರೀಕೃಷ್ಣರ ನಡೆ ಬಗ್ಗೆ ಜನ ಗೊಂದಲಕ್ಕೊಳಗಾಗುತ್ತಿದ್ದರು. ನಂತರ ಅವರ ಉದ್ದೇಶ ಸ್ಪಷ್ಟವಾಗುತಿತ್ತು.
ಅದರಂತೆ, ಜರಾಸಂಧನ ಕಥೆಯೂ ಅದೇ ರೀತಿಯದ್ದಾಗಿದೆ. ಜರಾಸಂಧನು ಶ್ರೀಕೃಷ್ಣನ ಮೇಲೆ ಪ್ರತಿ ದಾಳಿ ಮಾಡಿದಾಗ ಇಡಿ ಆತನ ಸೈನ್ಯವನ್ನು ಸಂಹಾರ ಮಾಡುವ ಶ್ರೀಕೃಷ್ಣ ಜರಾಸಂಧನನ್ನ ಮಾತ್ರ ಬಿಟ್ಟು ಕಳುಹಿಸುತ್ತಿದ್ದ ಕಾರಣ ಸಷ್ಟವಾಗಿದೆ.
ಜರಾಸಂಧ ಶ್ರೀಕೃಷ್ಣನ ತಾಯಿಯ ಮಾವನಾದ ಕಂಸನ ಮಾವನಾಗಿದ್ದನು. ಈ ಸಂಬಂಧದ ಹಿನ್ನೆಲೆ ಜರಾಸಂಧ ಕಂಸನಿಗೆ ಸಾಧ್ಯವಾದ ಎಲ್ಲಾ ರೀತಿಯ ಸಹಾಯ ಸಹಕಾರ ನೀಡುತ್ತಿದ್ದನು.
ಕಂಸನನ್ನು ಕೊಂದ ಶ್ರೀಕೃಷ್ಣ ನಿಗೆ ಜರಾಸಂಧನೆ ಪ್ರಮುಖ ಶತ್ರು ಆಗಿದ್ದನು.
ಜರಾಸಂಧ ಶ್ರೀಕೃಷ್ಣ ಮತ್ತು ಬಲರಾಮನನ್ನು ಕೊಲ್ಲಲು ಮಥುರೆಯ ಮೇಲೆ 18 ಬಾರಿ ದಾಳಿ ನಡೆಸಿದ್ದನು. ಪ್ರತಿ ಬಾರಿ ಜರಾಸಂಧನು ಸೋತರೂ ಮತ್ತೆ ಸೈನ್ಯವನ್ನು ಸಂಗ್ರಹಿಸಿ, ಶ್ರಿ ಕೃಷ್ಣ ವಿರೋಧಿ ರಾಜರೊಂದಿಗೆ ಕೈಜೋಡಿಸಿ ಪುನಃ ಪುನಃ ದಾಳಿ ನಡೆಸುತ್ತಿದ್ದನು. ಶ್ರೀಕೃಷ್ಣ ಜರಾಸಂಧನ ಸೈನ್ಯವನ್ನು ಸೋಲಿಸಿ ಆದರೆ ಜರಾಸಂಧನನ್ನು ಮಾತ್ರ ಬಿಟ್ಟು ಕಳುಹಿಸುತ್ತಿದ್ದನು. ಇದು ಬಲರಾಮನಿಗೆ ವಿಚಿತ್ರವೆನಿಸಿತು.
ಕೊನೆಗೆ ಒಂದು ಯುದ್ಧದ ನಂತರ ಬಲರಾಮ ತನ್ನ ಸಹನೆಯ ಕಟ್ಟೆ ಹೊಡೆದ ಪರಿಣಾಮ ಶ್ರೀಕೃಷ್ಣನನ್ನು ಪ್ರಶ್ನಿಸಿದನು.
ಪದೇ ಪದೇ ನಮ್ಮ ಮೇಲೆ ದಾಳಿ ನಡೆಸಿ, ಸೋತರೂ ಜರಾಸಂಧ ಭೂಮಿಯ ಮೂಲೆ ಮೂಲೆಗಳಿಂದ ದುಷ್ಟರನ್ನು ಸೇರಿಸಿಕೊಂಡು ನಮ್ಮ ಮೇಲೆ ದಾಳಿ ಮಾಡುತ್ತಲೇ ಇದ್ದಾನೆ. ಆದರೆ ನೀನು ಇಡಿ ಸೈನ್ಯವನ್ನು ಕೊಂದು, ನಿಜವಾದ ಅಪರಾಧಿ ಜರಾಸಂಧನನ್ನು ಕೊಲ್ಲದೆ ಏಕೆ ಬಿಟ್ಟು ಕಳುಹಿಸುತ್ತಿದ್ದೀಯಾ.? ಎಂದು ಕೋಪದಿಂದಲೇ ಕೇಳಿದ.
ಬಲರಾಮನ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಶ್ರೀಕೃಷ್ಣ..ಓ ಸಹೋದರ, ನಾನು ಉದ್ದೇಶಪೂರ್ವಕವಾಗಿ ಯೇ ಜರಾಸಂಧನನ್ನು ಬಿಟ್ಟು ಬಿಡುತ್ತಿದ್ದೇನೆ. ಯಾಕಂದ್ರೆ ಅವನು ಭೂಮಿಯಾದ್ಯಂತ ದುಷ್ಟರನ್ನು ಒಟ್ಟು ಗೂಡಿಸಿ ನನ್ನ ವಿರುದ್ಧ ಯುದ್ಧಕ್ಕೆ ಬರುತ್ತಾನೆ. ಇದರಿಂದ ನಾನು ಒಂದೇ ಸ್ಥಳದಲ್ಲಿ ಉಳಿದು, ಎಲ್ಲಾ ದುಷ್ಟರನ್ನು ಸುಲಭವಾಗಿ ಸಂಹರಿಸಬಹುದು. ಇಲ್ಲವಾದಲ್ಲಿ ಈ ದುಷ್ಟರನ್ನು ಕೊಲ್ಲಲಿ ನಾನು ಇಡಿ ಭೂಮಿಯನ್ನು ಸುತ್ತಬೇಕಾಗುತ್ತದೆ. ಜರಾಸಂಧ ನನ್ನ ಕೆಲಸವನ್ನು ಸುಲಭಗೊಳಿಸಿದ್ದಾನೆ. ಸರ್ವ ದುಷ್ಟರನ್ನು ಕೊಂದ ನಂತರ, ಅಂತಿಮವಾಗಿ ಅವನನ್ನು ಕೊಲ್ಲುತ್ತೇನೆ ಚಿಂತಿಸಬೇಡ ಎಂದು ವಿವರೊಸೊದನು.