ಪ್ರಮುಖ ಸುದ್ದಿವಿನಯ ವಿಶೇಷ

ಎಐ ಧ್ವನಿಯಲ್ಲಿ ‘ಪಲ್ಲವಿ’ ಮೋಡಿಃ ವಿದ್ಯಾರ್ಥಿ ಡ್ಯಾನಿಯಲ್ ಜಾದೂ

ಮಾನವ ಗಾಯಕ ಇಲ್ಲ, ಸ್ಟುಡಿಯೋ ಇಲ್ಲ ಆದ್ರೂ ‘ಪಲ್ಲವಿ’ ಹಿಟ್

ಎಐ ಧ್ವನಿಯಲ್ಲಿ ‘ಪಲ್ಲವಿ’ ಮೋಡಿಃ ವಿದ್ಯಾರ್ಥಿ ಡ್ಯಾನಿಯಲ್ ಜಾದೂ
ಮಾನವ ಗಾಯಕ ಇಲ್ಲ, ಸ್ಟುಡಿಯೋ ಇಲ್ಲ ಆದ್ರೂ ‘ಪಲ್ಲವಿ’ ಹಿಟ್

ಮಲ್ಲಿಕಾರ್ಜುನ ಮುದ್ನೂರ
ವಿನಯವಾಣಿ ಸಮಾಚಾರ
Yadgiri, ಶಹಾಪುರಃ ಲಕ್ಷಾಂತರ ರೂಪಾಯಿ ಖರ್ಚಿಲ್ಲ, ಸ್ಟಾರ್ ಗಾಯಕರೂ ಇಲ್ಲದೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ (ಎಐ) ಅನ್ನೆ ಗಾಯಕನನ್ನಾಗಿ ಮಾಡಿಕೊಂಡು ಶಹಾಪುರದ ಚಿಗುರು ಮೀಸೆಯ ಪ್ರಸ್ತುತ ಡಿಪ್ಲೋಮಾ ಅಭ್ಯಾಸ ಮಾಡುತ್ತಿರುವ 17 ರ ಪೋರ ಡ್ಯಾನಿಯಲ್ ಎಫ್ರೇಮ್ ರಾಜ್ ‘ಪಲ್ಲವಿ’ ಕನ್ನಡ ಅಲ್ಬಂ ಸಾಂಗ್ ಸೃಷ್ಟಿಸಿದ್ದಾರೆ.
ಈಗಾಗಲೇ ಕಳೆದ ಹದಿನೈದು ದಿವಸದಲ್ಲಿಯೇ ಯೂಟ್ಯೂಬ್‍ನಲ್ಲಿ 7 ಸಾವಿರಕ್ಕಿಂತ ಹೆಚ್ಚು ವೀಕ್ಷಣೆ ಕಂಡ ಈ ಹಾಡು ದಿನೇ ದಿನೇ ವೀಕ್ಷಕರ ಸಂಖ್ಯೆ ಏರುತ್ತಿದೆ. ಅಲ್ಲದೆ ಕಲ್ಯಾಣ ಕರ್ನಾಟಕದ ಮಂದಿ ಇದು ಕಕ ಕಮಾಲ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ಫರನ ಸಾಧನೆಗೆ ಸೆಲ್ಯೂಟ್ ಶಹಭಾಷ್ ಎನ್ನುತ್ತಿದ್ದಾರೆ. ಆತನ ಎಐ ಕೈಚಳ ಮೋಡಿ ಮಾಡಿದೆ.

“ಪಲ್ಲವಿ” ತಂಡ

ಎಐ ಕರಾಮತ್ತು ಹೇಗೆ..?
ಡ್ಯಾನಿಯಲ್ ಸ್ವತಃ ಸಾಹಿತ್ಯ ಬರೆದು, ಎಯ ಟೂಲ್ ಬಳಸಿ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡು ಯಾವುದೇ ಮಾನವ ಗಾಯಕರು ಹಾಡಿರುವದಿಲ್ಲ. ಇದು ಎಐ ವಾಯ್ಸ್ ಸಿಂಥೆಸಿಸ್ ತಂತ್ರಜ್ಞಾನ ಬಳಸಿ ಹಾಡಿಸಲಾಗಿದೆ. ಇದರಿಂದ ಬಜೆಟ್ ನೀಗಿಸಲು ಅನುಕೂಲವಾಯಿತು. ಇಲ್ಲಿ ಎಐ ಯೇ ಸಿಂಗರ್ ಆಗಿ ಹಾಡಿದೆ ಎನ್ನುತ್ತಾರೆ ಡ್ಯಾನಿಯಲ್.
ತಂಡದ ಶ್ರಮಃ ‘ಪಲ್ಲವಿ’ ಆಲ್ಬಂ ಸಾಂಗ್‍ಗೆ ಎಐ ತಂತ್ರಜ್ಞಾನ ಪೂರಕ ಸಹಾಯ ಸಹಕಾರ ನೀಡಿದೆ. ಅಲ್ಲದೆ ನೇಹಾ ಸಿ. ಜಾಧವ್ ನಿರ್ದೇಶನ, ಆಕಾಶ್ ಸಾಹುಕಾರ್ – ನಿವೇದಿತಾ ನಾಟೇಕಾರ ಅಭಿನಯ, ಶಶಾಂಕ್ ಶಿರವಾಳ ಛಾಯಾಗ್ರಾಹಣ, ರವಿ ಸಾಹುಕಾರ ಮತ್ತು ಇಮ್ಯಾನುವೆಲ್ ವಿಜಯರಾಜ್ ನಿರ್ಮಾಣದೊಂದಿಗೆ ಡಿಲಕ್ಸ್ ಸುಪೀರಿಯರ್ ಬ್ಯಾನರ್ ನಡಿ ನಮ್ಮ ಶಹಾಪುರ ತರಕಾರಿ ಮಾರ್ಕೇಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರಿಕರಣ ಮಾಡಿದೆ. ತಂಡದ ಪ್ರೋತ್ಸಾಹ ಶ್ರಮ ಇದರಲ್ಲಿದೆ ಎನ್ನುತ್ತಾರೆ ವಿದ್ಯಾರ್ಥಿ ಡ್ಯಾನಿಯಲ್.

ಡ್ಯಾನಿಯಲ್

ಹುಡುಗರ ಜಾದೂಗೆ ತಲೆದೂಗಿದ ವೀಕ್ಷಕರುಃ
ಎಐ ಸಿಂಗರ್ ಆದ್ರೂ ಉತ್ತಮ ಫೀಲ್ ಮೂಡಿದೆ. ಯೂಟ್ಯೂಬ್ ನಲ್ಲಿ ಉತ್ತರ ಕರ್ನಾಟಕದ ಜನ ಸಾಕಷ್ಟು ಕಾಮೆಂಟ್‍ಗಳು ಬಂದಿದ್ದು, ನಮ್ಮನ್ನು ಇನ್ನಷ್ಟು ಉತ್ಸಾಹ ಭರಿತರನ್ನಾಗಿಸಿದೆ. ಮುಂದಿನ ದಿನಗಳಲ್ಲಿ ಇದೇ ತಂಡದೊಂದಿಗೆ ಇನ್ನೆರೆಡು ಆಲ್ಬಂ ಸಾಂಗ್ ರೆಡಿ ಮಾಡುತ್ತಿರುವ, ಅದರಲ್ಲೀ ಎಐ ತಂತ್ರಜ್ಞಾನವನ್ನು ಇನ್ನಷ್ಟು ಬಳಕೆ ಮಾಡಿಕೊಳ್ಳುತ್ತಿದ್ದೇನೆ. ನಾನು ಎಐ ಸ್ವಯಂಪ್ರೇರಿತನಾಗಿ ಬಳಕೆ ಮಾಡಿಕೊಳ್ಳುತ್ತಿದ್ದೇನೆ ಎಲ್ಲಿಯೂ ಎಐ ಅಭ್ಯಾಸ ತರಬೇತಿ ಪಡೆಯಲು ಹೋಗಿಲ್ಲ. ನಾನೇ ಸ್ವತಃ ಟೂಲ್ ಬಳಸಿಕೊಳ್ಳುತ್ತಿದ್ದೇನೆ. ಇದೊಂದು ನಮ್ಮಂಥ ಸ್ವಪ್ರತಿಭೆಗಳಿಗೆ ಉತ್ತಮ ವೇದಿಕೆ ಒದಗಿಸಿದೆ. ನಮ್ಮ ಕೈಚಳಕ ಎಐ ಮೂಲಕ ತೋರಿಸಬಹುದಾಗಿದೆ.

ಕಲ್ಯಾಣ ಕರ್ನಾಟಕದಲ್ಲಿ ಇದೇ ಮೊದಲು..!

ಎಐ ಸಿಂಗರ್ ಬಳಸಿ ಪೂರ್ಣ ಕನ್ನಡ ಆಲ್ಬಂ ಸಾಂಗ್ ಮಾಡಿರುವದು ಕಕ ಭಾಗದಲ್ಲಿ ಇದೇ ಮೊದಲೆನಿಸಿದೆ. ಇನ್ನೊ ಎರಡು ಸಾಂಗ್ ಕೆಲಸ ನಡೆದಿದೆ. ಅದರಿಂದ ನಾವು ರಾಜ್ಯದಾದ್ಯಂತ ಗುರುತಿಸಿಕೊಳ್ಳುವ ಅವಕಾಶವಿದೆ. ಆ ನಿಟ್ಟಿನಲ್ಲಿ ಶ್ರಮವಹಿಸಿ ಕೆಲಸ ಮಾಡುತ್ತಿದ್ದೇವೆ ಎಂದು ತಂಡ ಖುಷಿಯಿಂದಲೇ ವಿನಯವಾಣಿಯೊಂದಿಗೆ ಹಂಚಿಕೊಂಡಿತು.

Related Articles

Leave a Reply

Your email address will not be published. Required fields are marked *

Back to top button