ಪ್ರಮುಖ ಸುದ್ದಿಬಸವಭಕ್ತಿ

ಮಾ.29ಕ್ಕೆ ಚೌಡಯ್ಯ ಜಾತ್ರೆ -ಪೂರ್ವಭಾವಿ ಸಭೆ

ಯಾದಗಿರಿ: ಜಿಲ್ಲೆಯ ವಡಗೇರಾ ತಾಲ್ಲೂಕಿನ ಹಿರೇ ತುಮಕೂರು ಗ್ರಾಮದ ದೇವಸ್ಥಾನದ ನಿಜಶರಣ ಅಂಬಿಗರ ಚೌಡಯ್ಯನವರ ಜಾತ್ರೆ ಹಾಗೂ ರಥೋತ್ಸವ ಸಮಾರಂಭ ಮಾರ್ಚ 29ಕ್ಕೆ ಜರುಗಲಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಪೂರ್ವ ಭಾವಿ ಸಭೆ ಜರುಗಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಉಮೇಶ ಕೆ.ಮುದ್ನಾಳ, ಪ್ರಸಕ್ತ 38ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ವಿಜೃಂಭಣೆಯಿಂದ ಆಚರಿಸಲು ಸರ್ವರೂ ಸಹಕಾರ ಬಹುಮುಖ್ಯವಿದೆ.

ಸಮಾಜದ ಜಾಗೃತಿ ಮೂಡಿಸಿದ ಚೌಡಯ್ಯನವರನ್ನು ರಾಜ್ಯಕ್ಕೆ ಪರಿಚಯಿಸಿದ ವಿಠಲ್ ಹೇರೂರು ಅವರು ಇಂತಹ ಸಂಭ್ರಮ ನೋಡಲು ಇರಬೇಕಿತ್ತು ಎಂದು ನೆನಪಿಸಿಕೊಂಡರು. ಈ ಬಾರಿ ಜಾತ್ರೆಯ ಯಶಸ್ವಿಗೆ ತಂಡಗಳನ್ನು ರಚಿಸಿ ಸಮಿತಿಗಳನ್ನು ನೇಮಿಸಿ ಎಲ್ಲ ಕಡೆಗೆ ಪ್ರಚಾರ ಮಾಡುವ ಮೂಲಕ ಜಾತ್ರೆ ಯಶಸ್ವಿಗೊಳಿಸಲು ಎಲ್ಲರೂ ಶ್ರಮಿಸಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಜಾತ್ರಾ ಮಹೋತ್ಸವ ಯಶಸ್ವಿಗೆ ಸಮಿತಿ ರಚಿಸಲಾಯಿತು. ರಾಜ್ಯದಲ್ಲಿಯೇ ಚೌಡಯ್ಯನ ಜಾತ್ರೆ ಪ್ರಪ್ರಥಮವಾಗಿ ಜಿಲ್ಲೆಯ ಹಿರೇ ತುಮಕೂರಿನಲ್ಲಿ ನಡೆಯುತ್ತಿದೆ, ಜಾತ್ರೆಯ ಅಂಗವಾಗಿ ಮಾ.29 ರಂದು ಬೆಳಗ್ಗೆ ಗಂಗಾ ಸ್ಥಳಕ್ಕೆ ಹೋಗವುದು, ಸಂಜೆ 5.30ಕ್ಕೆ ರಥೋತ್ಸವ ಜರುಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಯಂಕಪ್ಪ, ಬಸವರಾಜಪ್ಪ, ದೇವಪ್ಪ, ಚೌಡಯ್ಯ, ಶಿವಪ್ಪ, ಸಾಬಣ್ಣ, ರಂಗಪ್ಪ, ನಿಂಗಪ್ಪ, ದಂಡಪ್ಪ, ಚೆನ್ನಪ್ಪ, ಲಗುಮಪ್ಪ, ಲಕ್ಷ್ಮಣ, ಮಲ್ಲು, ಸಾಬಣ್ಣ, ಯಲ್ಲಪ್ಪ, ಮಲ್ಲಪ್ಪ, ತಿಪ್ಪಣ್ಣ, ಕಾಶಪ್ಪ, ಬಸವರಾಜ ನಿಜಶರಣ ಅಂಬಿಗರ ಚೌಡಯ್ಯ ಸಂಘದ ಪದಾಧಿಕಾರಿಗಳು ಯುವಕರು ಇನ್ನಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button