ಕಾವ್ಯಸಂಸ್ಕೃತಿ

“ಜನ್ಮಾಷ್ಟಮಿ” ನಾಡಿನ ಖ್ಯಾತ ಸಾಹಿತಿ ಡಿ.ಎನ್.ಅಕ್ಕಿ ರಚಿತ ಕಾವ್ಯ

ಸಾಹಿತಿ, ಸಂಶೋಧಕ ಡಿ.ಎನ್.ಅಕ್ಕಿ ರಚಿತ ಹೊಸ ಕಾವ್ಯ " ಜನ್ಮಾಷ್ಟಿಮಿ"

ಜನ್ಮಾಷ್ಟಮಿ

ಹಬ್ಬಿತಬ್ಬಿದ ಕಗ್ಗತ್ತಲು ಗುಡುಗು ಮಳೆಯು ಸುತ್ತಲು | ನಟ್ಟಿರುಳ ಸೀಳಿ ಬೆಳಕು ಬಂದಿತು ಬಂಧಿಖಾನೆಗೆ || 1 |

ರಭಸದ ಹರಿವು ದಾರಿ ಕೊಟ್ಟಿತು ಒಳಿತಿಗೆ | ಮಥುರೆ ಅದುರಿತು ಗೋ ಕುಲದಿ ಗಂಧವು ಹರಡಿತು ॥ 2 ॥

ಬವಣೆ ಬೇಗೆಯ ನೀಗಲು ಕೊಳಲ ಇಂಪಿನ ಸಿಂಚನ | ಜೀವಜಾಲದ ಸೌಖ್ಯಕೆ ಗಿರಿ ಎತ್ತಿದನು ಗೋವರ್ಧನ || 3 |

ಗೋಪಿಕೆಯರ ಸರಸ ರಾಧೆಯ ನಿಷ್ಕಲ್ಮಶದ ಪ್ರೇಮವು । ದಾರಿದ್ರವ ದೂರ ಮಾಡಿ ಸಖ್ಯದ ಹಿರಿಮೆಯ ಮೆರೆಯಿತು ॥ 4 ॥

ಹೊಲ್ಲಕೆಲಸದ ನಾಶಕೆ ಸು ದರುಶನ ಗಾಲಿಯು ತಿರುಗಿತು | ಅಧರ್ಮವಳಿಸಿ ಸುಧರ್ಮಕಾಗಿ ಪಾಂಚಜನ್ಯವು ಮೊಳಗಿತು ॥ 5 ॥

ದರ್ಪ ದಬ್ಬಾಳಿಕೆ ಅಳಿಯಲು ಭರವಸೆಯ ಅವತಾರವು । ಸಜ್ಜನ ಸಭ್ಯತೆಯ ಕಾಯಲು ಬಂದೇ ಬರುವುದು ದೈವವು ॥ 6 ॥

ಡಿ.ಎನ್.ಅಕ್ಕಿ.

08.08.2025.

Related Articles

Leave a Reply

Your email address will not be published. Required fields are marked *

Back to top button