ಪ್ರಮುಖ ಸುದ್ದಿ

ದಸರಾ ಆನೆಗಳ ಮೈಮೇಲೆ ಅದ್ಭುತ ಚಿತ್ತಾರ ಬಿಡಿಸಿದವರಾರು.?

ಐತಿಹಾಸಿಕ ಜಂಬೂ ಸವಾರಿಗೆ ಕಲಾವಿದನ ಚಿತ್ತಾರ

ಮೈಸೂರುಃ ಇಂದು ನಡೆಯುವ ಜಂಬೂ ಸವಾರಿಯಲ್ಲಿ ಆಕರ್ಷಕ ಮತ್ತು ಶಕ್ತಿಯುತವಾಗಿ ಜವಬ್ದಾರಿಯ ಕಾರ್ಯ ಸೇವೆ ನಡೆಯವುದೇ ಆನೆಗಳದ್ದು, ಇದರಲ್ಲಿ ನುರಿತ ಮಾವುತರು ಆನೆಗಳಿಗೆ ತರಬೇತಿ ನೀಡಿ ಸಿದ್ಧತೆಗೊಳಿಸಇರುತ್ತಾರೆ.

ಈ ಆನೆಗಳ ಮೈಮೇಲೆ ಬಣ್ಣ ಬಣ್ಣದ ಚಿತ್ತಾರ ಬಿಡಿಸಿದ ಕಲಾವಿದ ಕೈಚಳಕ ಈಗ ಅತ್ಯಾಕರ್ಷಕ. ಕಳೆದ 16 ವರ್ಷದಿಂದ ಈ ದಸಾರ ಮೆರವಣಿಗೆಯಲ್ಲಿ  ಭಾಗವಹಿಸುವ ಆನೆಗಳ ಮೈಮೇಲೆ ಸೋಮಲಿಂಗಪ್ಪ ಎಂಬ ಕಲಾವಿದ ತನ್ನ ತಂಡದೊಂದಿಗೆ ಚಿತ್ರವನ್ನು ಬಿಡಿಸುತ್ತಿದ್ದಾನೆ.

ಈ ಬಾರಿ ಸೋಮಲಿಂಗಪ್ಪ ಅವರ ಕಲಾವಿದರ ತಂಡ ತಾಯಿ ಚಾಮುಂಡಿ ವಿಗ್ರಹವನ್ನು ಹೊತ್ತ ಅರ್ಜುನ(ಆನೆ) ಸೇರಿದಂತೆ ಉಳಿದೆಲ್ಲ ಆನೆಗಳ ಮೈಮೇಲೇ ಆಕರ್ಷಕವಾಗಿ ಕಂಗೊಳಿಸುತ್ತಿರುವ ಬಣ್ಣ ಬಣ್ಣದ ಚಿತ್ತಾರ ಕಲಾವಿದರ ಕೈಚಳಕ ನೋಡುಗರ ಗಮನ ಸೆಳೆಯುತ್ತಿದೆ.

ಈಗಾಗಲೇ ಎಲ್ಲಾ ಆನೆಗಳ ಮೇಲೆ ಬಿಡಿಸಿದ ಚಿತ್ತಾರ ಸಮೇತ ಆನೆಗಳು ಜಂಬೂ ಸಾವರಿ ಮೆರವಣಿಗೆ ಸಿದ್ಧಗೊಂಡಿವೆ ಎನ್ನಲಾಗಿದೆ. ಕೆಲವೇ ಕ್ಷಣಗಳಲ್ಲಿ ಮೈಮೇಲೆ ಚಿತ್ತಾರ ಹೊಂದಿದ್ದ ಆನೆಗಳ ಸೌಂದರ್ಯ ನೋಡುವ ಭಾಗ್ಯ ವೀಕ್ಷಕರದ್ದಾಗಿದೆ.

Related Articles

Leave a Reply

Your email address will not be published. Required fields are marked *

Back to top button