ಕಾವ್ಯ

“ಅಂತ್ಯೋದಯ ಆಚಾರ್ಯ” ಹಿರಿಯ ಸಾಹಿತಿ ಅಕ್ಕಿ ಬರೆದ ಕಾವ್ಯ

ಅಂತ್ಯೋದಯದ ಆಚಾರ್ಯ

ಕಲ್ಲಹಳ್ಳಿಯ ಮಣ್ಣು ಕಣ್ಣು ಬಿಟ್ಟಾಗ ಮೈ-
ಸೂರು ನಾಡತುಂಬ
ಕರ್ನಾಟಕದ ಹೊಂಬೆಳಕು.

ತಲೆತಲಾಂತರದಿಂದ ಅದು
ಮಿಟ್ಟ ಎದೆಯಾಳದಳಲಿಗೆ
ಸಂತಸದ ಕೊಳಲನಾದ ಕತ್ತಲ ಭೂ-
ಗತದ ಬೀಜಭ್ರೂಣಗಳಿಗೆಲ್ಲ
ನವಜೀವ ಜಲ.
ನಿಕೃಷ್ಟ ಗುಡಿಸಲದ ಮುಳ್ಳು
ಬೇಲಿಯ ಮೇಲೆ ಹೊಸರಾಗ
ಹಾಡಿದವು ಹಕ್ಕಿಬಳಗ.

ಸೀಳಿದೆದೆಯಂಗಳದ ತುಂಬ ಪುಟಿ-
ನೆಗೆದ ಬಣ್ಣಬಣ್ಣದ ಹೂಗಳ ನಗೆಯ ಚಿತ್ತಾರ.
ಗವ್ವೆನ್ನುವ ಕಗ್ಗತ್ತಲೆಗೆ ಜಗ್ಗನೆಯ
ಭಾಗ್ಯ ಜ್ಯೋತಿಯ ಬೆಳಕು
ಬಾಗಿದ ಬೆನ್ನುಗಳಿಗೆ ಹುಮ್ಮಸದ
ಸೆಟೆದೆದೆಯ ಹೊಸನಡಿಗೆ
ಗಂದದೆಣ್ಣೆಯು ಹೊಲಸು ಹೊತ್ತತಲೆಗೆ ಅಮಾನವೀಯ
ಅನಿಷ್ಟಗಳಿಗೆಲ್ಲ ಮಂಗಳವ
ಹಾಡಿದ ಹರಿಕಾರ
ಕನ್ನಡದ ಕನಸುಗಾರ
ದಾಪುಗಾಲಿಡುತ ಸಾಗಿದ ನಿನ್ನ
ಸುತ್ತಲೂ ನೇಯ್ದ ಕು- ತಂತ್ರಜಾಲಕೆ ಸಿಲುಕಿ ವಿಲಿವಿಲಿ
ಒದ್ದಾಡಿ ನಮಗೆಲ್ಲ ನೀ
ವಿದಾಯ ಹೇಳಿದ್ದು ನಿಜಕ್ಕೂ
ದೊಡ್ಡ ದುರಂತ ಅರಸು, ಎಲ್ಲಿ
ಅರಸಲಿ ನಿನ್ನಂಥ ಹಿರಿದಾದ ಮನಸು.

ಡಿ.ಎನ್.ಅಕ್ಕಿ.ಗೋಗಿ. 9448577898.

Related Articles

Leave a Reply

Your email address will not be published. Required fields are marked *

Back to top button