ಕ್ಯಾಂಪಸ್ ಕಲರವ

ನಿರಂತರ ಶ್ರಮ ಸಾಧನೆಗೆ ಪೂರಕ-ಡಾ.ಬಸವರಾಜ ಇಜೇರಿ

ವಿದ್ಯಾರ್ಥಿ ಜೀವನ ಆದರ್ಶಮಯವಾಗಿರಲಿ-ಡಾ.ಇಜೇರಿ

ಯಾದಗಿರಿ, ಶಹಾಪುರಃ ನಗರ ಪ್ರದೇಶದ ಮಕ್ಕಳು ಪುಸ್ತಕದ ಹುಳಗಳಂತೆ ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಯಶಸ್ವಿಯಾಗಬಹುದು. ಆದರೆ ಗ್ರಾಮೀಣ ಪ್ರದೇಶದ ಮಕ್ಕಳು ಸೃಜನಾತ್ಮಕವಾಗಿ ಮತ್ತು ಸಾಮಾಜಿಕ ಮೌಲ್ಯಗಳೊಂದಿಗೆ ಸಮಾಜದಲ್ಲಿ ಬದುಕು ಕಟ್ಟಿಕೊಳ್ಳುವುದರ ಮೂಲಕ ಗ್ರಾಮಗಳಿಗೆ ಆದರ್ಶವಾಗುತ್ತಾರೆ ಎಂದು ನಗರಸಭೆ ಉಪಾಧ್ಯಕ್ಷ ಡಾ.ಬಸವರಾಜ ಇಜೇರಿ ಅಭಿಪ್ರಾಯ ಪಟ್ಟರು.

ತಾಲೂಕಿನ ಭೀಮರಾಯನಗುಡಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಸ್ವಾಮಿ ವಿವೇಕಾನಂದ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಸ್ತುತ ಶಿಕ್ಷಣ ವ್ಯವಸ್ಥೆಯು ಮೆಕಾಲೆಯಿಂದ ಪ್ರೇರಿತವಾಗಿದ್ದು ಇದರಲ್ಲಿ ಬದಲಾವಣೆ ತರುವುದು ಅವಶ್ಯಕವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಆರೋಗ್ಯಕರವಾಗಿ ಸ್ಪರ್ಧಿಸಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು.

ಕೆಬಿಜೆಎನ್‍ಎಲ್ ಕಾರ್ಯನಿರ್ವಾಹಕ ಅಭಿಯಂತರ ಸುಭಾಶ ಮಾತನಾಡಿ, ಸ್ವಾಮಿ ವಿವೇಕಾನಂದರು ಭಾರತದ ಶ್ರೇಷ್ಠ ಸಂತ ಹಾಗೂ ಭಾರತೀಯ ಸಂಸ್ಕøತೀಯ ಪ್ರತೀಕ, ಸ್ವಾಮೀ ವಿವೇಕರ ಮಾತಿಗೆ ಇಡಿ ಜಗತ್ತು ತಲೆ ದೂಗುತಿತ್ತು. ಅವರು ಭಾರತೀಯಲ್ಲಿನ ಆಧ್ಯಾತ್ಮಿಕ ಶಕ್ತಿಗೆ ಪೂರಕವಾಗಿ ಹಲವಾರು ನಿದರ್ಶನಗಳ ಮೂಲಕ ತಿಳಿಸಿದ್ದರು.

ಡೋಂಗಿ ಮೌಢ್ಯ ಕುರಿತು ಪ್ರದರ್ಶನ ಮಾಡಲಿಲ್ಲ. ಭಾರತದ ನೆಲದ ಗುಣ ಕುರಿತು ಸತ್ಯದ ಸಾರಂಶವನ್ನು ಅವರು ಜಗತ್ತಿಗೆ ಉಣಬಡಿಸಿದರು ಎಂದರು. ಉಪನ್ಯಾಸಕ ಪಂಪಾಪತಿ ಶಿರ್ಣಿ ಸ್ವಾಗತಿಸಿದರು. ಡಾ. ರವೀಂದ್ರನಾಥ ಹೊಸ್ಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಾಂಶುಪಾಲ ಗುಂಡೇಕಾರ ರಾಮಚಂದ್ರರಾವ್ ಅಧ್ಯಕ್ಷತೆವಹಿಸಿದ್ದರು. ಉಪ ಪ್ರಾಂಶುಪಾಲ ಜಿ.ಎಮ್.ಬೋನಾಳ ಉಪಸ್ಥಿತರಿದ್ದರು. ಉಪನ್ಯಾಸಕ ದೇವೇಂದ್ರಪ್ಪ ಮಡಿವಾಳಕರ್ ನಿರೂಪಿಸಿದರು. ಶಿವರಾಜ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button